Advertisement

ಆಟೋರಿಕ್ಷಾ ಬಾಡಿಗೆ ವಿಚಾರ ಕೊಲೆಯಲ್ಲಿ ಅಂತ್ಯ

05:40 PM Sep 28, 2021 | Team Udayavani |

ಹುಬ್ಬಳ್ಳಿ: ಆಟೋರಿಕ್ಷಾ ಬಾಡಿಗೆ ಸರಿಯಾಗಿ ನೀಡುತ್ತಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.

Advertisement

ಹಳೇಹುಬ್ಬಳ್ಳಿ ನೇಕಾರನಗರ ಚವ್ಹಾಣ ಪ್ಲಾಟ್‌ನ ಲೋಕೇಶ ಮಹದೇವಪ್ಪ ಕಲಾಲ (24) ಕೊಲೆಯಾಗಿದ್ದಾನೆ. ಈತ ಮಾರುತಿ ಎಂಬುವರ ಆಟೋರಿಕ್ಷಾವನ್ನು ದಿನಕ್ಕೆ 200ರೂ.ದಂತೆ ಬಾಡಿಗೆ ಪಡೆದುಕೊಂಡು ಇನ್ನೊಬ್ಬರಿಗೆ ಕೊಟ್ಟಿದ್ದನಂತೆ. ಜೊತೆಗೆ ಎರಡು ದಿನಗಳಿಂದ ಆಟೋ ರಿಕ್ಷಾ ಬಾಡಿಗೆಯನ್ನು ಸರಿಯಾಗಿ ಕೊಟ್ಟಿರಲಿಲ್ಲವಂತೆ. ಇದೇ ಕಾರಣಕ್ಕೆ ಸಿಟ್ಟಾದ ಮಾರುತಿ ತನ್ನ ಸ್ನೇಹಿತರಾದ ಪ್ರಶಾಂತ, ರಾಜುನೊಂದಿಗೆ ಲೋಕೇಶ ಮನೆಗೆ ನುಗ್ಗಿ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಲೋಕೇಶ ರಾತ್ರಿ ಮನೆಯಲ್ಲಿ ಹಾಗೇ ಮಲಗಿದ್ದಾನೆ. ಆದರೆ ಬೆಳಗ್ಗೆ ನೋಡಿದರೆ ಹಾಸಿಗೆಯಲ್ಲೇ ಅಸುನೀಗಿದ್ದಾನೆ. ಮರಣೋತ್ತರ ಪರೀಕ್ಷೆ ನಂತರವೇ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next