Advertisement

ಬಿದ್ದು ಸಿಕ್ಕ ಚಿನ್ನಾಭರಣವಿದ್ದ ಬ್ಯಾಗ್‌ ಮರಳಿಸಿದ ಆಟೋ ಚಾಲಕ

01:28 AM Jun 14, 2022 | Team Udayavani |

ಬಂಟ್ವಾಳ: ಮಾಣಿಯಿಂದ ಬಿ.ಸಿ. ರೋಡ್‌ ಕಡೆಗೆ ಆಗಮಿಸುವ ವೇಳೆ ಆಟೋ ರಿಕ್ಷಾ ಚಾಲಕರೊಬ್ಬರಿಗೆ ಸಿಕ್ಕ ಚಿನ್ನಾಭರಣ ಹಾಗೂ ಮೊಬೈಲ್‌ ಇದ್ದ ವ್ಯಾನಿಟಿ ಬ್ಯಾಗ‌ನ್ನು ಅವರು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಮಾಣಿ ನಿವಾಸಿ ಆಟೋ ಚಾಲಕ ಶಂಕರ ನಾರಾಯಣ ಶೆಟ್ಟಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕರಾಗಿದ್ದು, ಅವರು ಬಿ.ಸಿ. ರೋಡಿಗೆ ಆಗಮಿಸುವ ವೇಳೆ ಕಲ್ಲಡ್ಕ ಸಮೀಪ ಬ್ಯಾಗ್‌ ಸಿಕ್ಕಿತ್ತು.

ಬಿ. ಮೂಡಾ ಗ್ರಾಮದ ನಿವಾಸಿ ರುಕ್ಸಾನ ಅಬ್ದುಲ್‌ ಮಜೀದ್‌ ಅವರು ಸೋಮವಾರ ಮಾಣಿಯಿಂದ ಬಿ.ಸಿ. ರೋಡಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ವ್ಯಾನಿಟಿ ಬ್ಯಾಗ್‌ ಕಳೆದುಕೊಂಡಿದ್ದರು.

ಅದರಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್‌ ಇದ್ದು, ಅದು ಸಿಕ್ಕರೆ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲೂ ಮನವಿ ಮಾಡಿದ್ದರು.

ಬ್ಯಾಗನ್ನು ಪೊಲೀಸರ ಸಮ್ಮುಖದಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next