Advertisement

ಚಿನ್ನಾಭರಣ ಮರಳಿಸಿದ ರಿಕ್ಷಾ ಚಾಲಕ

04:15 AM Jul 03, 2018 | Team Udayavani |

ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಅರೆಮಲೆ ಬೆಟ್ಟ ನಿವಾಸಿ, ರಿಕ್ಷಾ ಚಾಲಕ ಪೊಡಿಮೋನು ಅವರು ನಾಳಕ್ಕೆ ಬಾಡಿಗೆ ತೆರಳಿ ಹಿಂದಿರುಗುವ ವೇಳೆಗೆ ರಸ್ತೆ ಬದಿಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ  ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ ಅನ್ನು ವಾರಸುದಾರರಿಗೆ ಹಸ್ತಾಂತರಿಸಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Advertisement

ಜೂ. 30ರ ರಾತ್ರಿ ನಾಳ – ಪರಪ್ಪು ಮಧ್ಯೆ ಈ ಬ್ಯಾಗ್‌ ಸಿಕ್ಕಿದ್ದು, ಅದನ್ನು ಜತೆಗಿದ್ದವರೊಂದಿಗೆ ಸೇರಿ ಪರಿಶೀಲಿಸಿದಾಗ ಚಿನ್ನಾಭರಣ, ನಗದು ಹಾಗೂ ಸ್ವಿಚ್ಡ್ ಆಫ್‌ ಆಗಿದ್ದ ಮೊಬೈಲ್‌  ಕಂಡು ಬಂತು. ಬಳಿಕ ಅದೇ ಮೊಬೈಲ್‌ ನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚಿನ್ನಾಭರಣ, ನಗದನ್ನು ಮರಳಿಸಿದ್ದಾರೆ. ಪರ್ಸ್‌ ಕಳೆದುಕೊಂಡವರು ಪುತ್ತೂರು ಬಲ್ನಾಡಿನವರಾಗಿದ್ದು, ಪೊಡಿ ಮೋನು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇವರು 1982ರಿಂದ ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು, ಪೋಡಿಯಾಕ ಎಂದೇ ಚಿರಪರಿಚಿತರಾಗಿದ್ದಾರೆ. 2014ರಲ್ಲೂ ಇವರಿಗೆ ಇಂಥದ್ದೇ ಅಮೂಲ್ಯ ಬ್ಯಾಗ್‌ ಸಿಕ್ಕಿದ್ದು, ಆಗಲೂ  ವಾರಸುದಾರರಿಗೆ ಹಸ್ತಾಂತರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next