Advertisement

ಹಸಿವಿನಿಂದ ನರಳುವ ಮೊದಲೇ ಕೊಂದುಬಿಡಿ !

08:45 PM May 10, 2023 | Team Udayavani |

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಎನ್ನುತ್ತಿದ್ದಂತೆ ನೆನಪಾಗುವುದೇ ಕಾಂಗರೂಗಳು. ಕಾಂಗರೂ ದೇಶದ ಪ್ರಮುಖ ಆಕರ್ಷಣೆ ಮಾತ್ರವಲ್ಲದೇ, ಸಂರಕ್ಷಿತ ಪ್ರಾಣಿ ಸಂತತಿಯೂ ಹೌದು. ಆದರೆ, ಅದೇ ದೇಶದಲ್ಲಿ ಈಗ ಕಾಂಗರೂಗಳನ್ನು ಗುಂಡಿಟ್ಟು ಕೊಲ್ಲುವಂತೆ ಕರೆ ನೀಡಲು ಯೋಜಿಸಲಾಗಿದೆ.

Advertisement

ಹೌದು, ಅಲ್ಲಿ ದಿನದಿಂದ ದಿನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗರೂಗಳು ಜನಿಸುತ್ತಿದ್ದು, ಅವುಗಳ ಆಹಾರ ಲಭ್ಯತೆಯ ಬಗ್ಗೆ ಕಾಳಜಿ ಹೆಚ್ಚಾಗಿದೆ. ಸೊಂಪಾದ ಮೇವು ಸಿಗದ ಕಾರಣ, ನಗರ ಪ್ರದೇಶಗಳಿಗೆ ಲಗ್ಗೆ ಇಟ್ಟು ,ಹಸಿವು ನೀಗಿಸಿಕೊಳ್ಳಲು ಪೇಪರ್‌ಗಳನ್ನೇ ತಿನ್ನಲು ಮುಂದಾಗುತ್ತಿವೆ.

ಈ ಹಿನ್ನೆಲೆ ಜೀವವಿಜ್ಞಾನಿ ಕ್ಯಾಥರಿನ್‌ ಎಂಬವರು ಕಾಂಗರೂಗಳು ಹಸಿವಿನಿಂದ ಸಾಯುವ ಹಂತ ತಲುಪುವ ಮುನ್ನ ಅವುಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅವುಗಳನ್ನು ಗುಂಡಿಟ್ಟು ಕೊಲ್ಲುವುದು ಉತ್ತಮವೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next