Advertisement

ಔರಾದ ಪೊಲೀಸರ ಕಾರ್ಯಾಚರಣೆ: 130 ಕೆ.ಜಿ ಗಾಂಜಾ ವಶ, ಇಬ್ಬರ ಬಂಧನ

04:48 PM Apr 10, 2023 | sudhir |

ಔರಾದ: ಆಂಧ್ರಪ್ರದೇಶದಿಂದ ಮುಂಬೈಗೆ ಬಲೆರೋ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಔರಾದ ಪೊಲೀಸರು ಏಕಾಂಬ ಚೆಕ್ ಪೋಸ್ಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೋಮವಾರ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಚಿಂತಾಪಲ್ಲಿ ಗ್ರಾಮದಲ್ಲಿ 130 ಕೆ.ಜಿ ಗಾಂಜಾ ಖರಿದಿ ಮಾಡಿ ಮುಂಬೈಗೆ ಸಾಗಿಸುತ್ತಿರುವಾಗ ಏಕಾಂಬ ಚೆಕ್ ಪೋಸ್ಟ್ ಬಳಿ ವಾಹನವನ್ನು ಪರಿಶೀಲನೆ ನಡೆಸಿದ ವೇಳೆ ವಾಹನದಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಬೀದರ್ ಮೂಲದ ರತಿಕಾಂತ ಹಾಗೂ ತೆಲಾಂಗಣ ಮೂಲದ ಶ್ರೀನಿವಾಸ ಎಂಬ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಪಿಐ ಮಲ್ಲಿಕಾರ್ಜುನ ಇಕ್ಕಳಗಿ, ಔರಾದ ಪಿಎಸ್ ಐ ಉಪೇಂದ್ರ, ಚಿಂತಾಕಿ ಪಿಎಸ್ ಐ ಸಿದ್ಧಲಿಂಗ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.

ಇದನ್ನೂ ಓದಿ: ಶಿವಾಜಿ ಸುರತ್ಕಲ್‌ 2 ರೆಗ್ಯುಲರ್‌ ಸ್ಕ್ರಿಪ್ಟ್  ಅಲ್ಲ… ನಿರ್ದೇಶಕ ಆಕಾಶ್‌ ಶ್ರೀವತ್ಸ ಮಾತು

Advertisement
Advertisement

Udayavani is now on Telegram. Click here to join our channel and stay updated with the latest news.

Next