Advertisement

ಲಖೀಂಪುರ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಘರ್ಷಣೆಯನ್ನಾಗಿ ಪರಿವರ್ತಿಸಲು ಸಂಚು

01:30 PM Oct 10, 2021 | Team Udayavani |

ಲಕ್ನೋ: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಘರ್ಷಣೆಯನ್ನಾಗಿ ಪರಿವರ್ತಿಸಲು ಸಂಚು ಹೂಡಲಾಗಿತ್ತು ಎಂದು ಬಿಜೆಪಿ ನಾಯಕ ವರುಣ್ ಗಾಂಧೀ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಇದು ಅನೈತಿಕ ಮತ್ತು ಸುಳ್ಳು ನಿರೂಪಣೆ ಮಾತ್ರವಲ್ಲ, ಇಂತಹ ತಪ್ಪುಗಳನ್ನು ಸೃಷ್ಟಿಸಬಾರದು. ಹಳೆಯ ಗಾಯಗಳನ್ನು ಸರಿಪಡಿಸಲು ಈ ಪೀಳಿಗೆ ಅಪಾರ ಸಮಯವನ್ನು ತೆಗೆದುಕೊಂದಿದೆ. ನಾವು ರಾಷ್ಟ್ರೀಯ ಏಕತೆಯ ಮೇಲೆ ಸಣ್ಣ ರಾಜಕೀಯ ಲಾಭಗಳನ್ನು ಪಡೆಯಲು ಮುಂದಾಗಬಾರದು ಎಂದು ಹೇಳಿದ್ದಾರೆ.

ರೈತರ ಮೇಲೆ ಕಾರು ಹತ್ತಿಸಿದ ಆರೋಪದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾರ ಪುತ್ರ ಆಶಿಷ್‌ ಮಿಶ್ರಾ ಅವರನ್ನು ಕೊನೆಗೂ ಶನಿವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿತ್ತು. ಅ.3ರಂದು 8 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರ ಕುರಿತು ಸತತ 8 ಗಂಟೆಗಳ ಕಾಲ ಮಿಶ್ರಾರನ್ನು ತನಿಖೆ ನಡೆಸಿದ ಬಳಿಕ ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next