Advertisement

8 ಅಂಗಡಿಗಳಲ್ಲಿ ಸರಣಿ ಕಳ್ಳತನಕ್ಕೆ ಯತ್ನ

06:02 PM Jul 04, 2022 | Team Udayavani |

ಲಿಂಗಸುಗೂರು: ಪಟ್ಟಣದ ವಿವಿಧೆಡೆಯಲ್ಲಿ ಎಂಟು ಅಂಗಡಿಗಳಲ್ಲಿ ಕೀಲಿ ಮುರಿದು ಕಳುವಿಗೆ ಯತ್ನ ನಡೆದ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ.

Advertisement

ಪಟ್ಟಣದ ಅಂಚೆ ಕಚೇರಿ, ಸರ್ಕಾರಿ ಆಸ್ಪತ್ರೆ, ಕಲಬುರಗಿ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಬಾಲಾಜಿ ಕೃಷಿ ಕೇಂದ್ರದ ಕೀಲಿಮುರಿದು ಅದರಲ್ಲಿ ಒಂದು ಖಾಲಿ ಕ್ಯಾಶ್‌ ಬ್ಯಾಗ ತೆಗೆದುಕೊಂಡು ಹೋಗಿದ್ದಾರೆ. ಯಾವುದೇ ವಸ್ತುಗಳ ಕಳ್ಳತನವಾಗಿಲ್ಲವೆಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಮ್ಯಾಂಗೊಕಿಡ್ಸ್‌ ಬಟ್ಟೆ ಅಂಗಡಿ, ಶ್ರೀ ಸಾಯಿ ಕ್ಲಿನಿಕ್‌ನ ಔಷಧ ಅಂಗಡಿ, ಸಿಮೆಂಟ್‌ ಅಂಗಡಿ ಸರಕಾರಿ ಆಸ್ಪತ್ರೆಯ ಹತ್ತಿರದ ಔಷಧ ಅಂಗಡಿ ಕಲಬುರಗಿ ರಸ್ತೆಯ ಪಕ್ಕದಲ್ಲಿರುವ ಸಾವುಜಿ ಖಾನಾವಳಿ ಹೀಗೆ ಹಲವಾರು ಕಡೆಯಲ್ಲಿ ಸರಣಿ ಕಳ್ಳತನ ಯತ್ನ ನಡೆದಿದೆ. ಅಂಗಡಿಯೊಂದರಲ್ಲಿ ಒಂದೂವರೆ ಲಕ್ಷ ಹಣ ಡ್ರಾದಲ್ಲಿ ಇಡಲಾಗಿತ್ತು. ಆದರೆ, ಕಳ್ಳರು ಅದನ್ನು ತೆಗೆಯಲು ಸಾಧ್ಯವಾಗದೆ ಹಣ ಉಳಿದುಕೊಂಡಿರುವುದರಿಂದ ಅದರ ಮಾಲೀಕರು ನಿಟ್ಟಿಸಿರು ಬಿಡುವಂತಾಗಿದೆ.

ಸಾವುಜಿ ಖಾನಾವಳಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ದೇವರ ಕಾಣಿಕೆ ಡಬ್ಬವನ್ನು ಎತ್ತಿಕೊಂಡು ಹೋಗಿದ್ದಾರೆಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next