Advertisement

ಚಿನ್ನ ಪಾಲಿಷ್‌ ನೆಪದಲ್ಲಿ ಕಳವಿಗೆ ಯತ್ನ: ಇಬ್ಬರ ಬಂಧನ

12:49 AM Sep 20, 2022 | Team Udayavani |

ಹೆಬ್ರಿ: ಹಿರಿಯಡಕ ಪರಿಸರದಲ್ಲಿ ಚಿನ್ನ ಪಾಲಿಷ್‌ ಮಾಡಿಕೊಡುವುದಾಗಿ ಹೇಳುತ್ತಾ ಕಳ್ಳತನಕ್ಕೆ ಯತ್ನಿಸುತ್ತಿದ್ದ ಬಿಹಾರ ಮೂಲದ ಆನಂದ ಕಿಶೋರ್‌ ಮೆಹ್ತಾ ಮತ್ತು ಮನೋಜ್‌ ಯಾದವ್‌ನನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

Advertisement

ಹಿರಿಯಡಕದ ಕಿಶೋರ್‌ ಅವರ ಮನೆಯ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬ್ಯಾಗನ್ನು ಹಾಕಿಕೊಂಡು ಬಂದು ಹಿಂದಿ ಭಾಷೆಯಲ್ಲಿ ಮಾತನಾಡಿ, ನಿಮ್ಮಲ್ಲಿ ಚಿನ್ನವಿದ್ದರೆ ಕೊಡಿ ಅದನ್ನು ಪಾಲಿಷ್‌ ಮಾಡಿ ಕೊಡುತ್ತೇವೆ ಎಂದು ಹೇಳಿದ್ದರು. ಅವರ ಬಗ್ಗೆ ವಿವರವಾಗಿ ವಿಚಾರಿಸಿದಾಗ ಅವರ ಮೇಲಿನ ಸಂಶಯ ಬಲಗೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿರಿಯಡಕ ಪೊಲೀಸರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next