Advertisement

ಮೈತ್ರಿಕೂಟದಿಂದ ವಿಧಾನಸಭೆ ಬಾಗಿಲು ಮುಚ್ಚುವ ಯತ್ನ

06:20 AM Oct 21, 2018 | Team Udayavani |

ಶಿವಮೊಗ್ಗ: ಉಪ ಚುನಾವಣೆ ನೆಪದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟವು ವಿಧಾನಸಭೆ ಬಾಗಿಲು ಮುಚ್ಚುವ ಪ್ರಯತ್ನ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಪಾದಿಸಿದರು. 

Advertisement

ಆಯನೂರಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿಕೂಟದ 60 ಚುನಾಯಿತ ಪ್ರತಿನಿ ಧಿಗಳು ಬಳ್ಳಾರಿಗೆ ಹೋಗುತ್ತಾರಂತೆ. ಶಿವಮೊಗ್ಗ ಮತ್ತು ಮಂಡ್ಯಕ್ಕೆ ಇನ್ನೆಷ್ಟು ಜನ ಹೋಗುತ್ತಾರೋ ಗೊತ್ತಿಲ್ಲ. ಉಪ ಚುನಾವಣೆ ಮುಗಿಯುವವರೆಗೆ ಯಾರೂ ಹೋಗಲ್ಲ ಎಂದಮೆಲೆ ವಿಧಾನಸೌಧದ ಬಾಗಿಲನ್ನು ಏಕೆ ತೆರೆಯಬೇಕು. ಇವರಿಂದಾಗಿ ಆಡಳಿತ ಯಂತ್ರ ಕುಸಿದಿದೆ. ಸರಕಾರ ದಿವಾಳಿಯಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮೂರೂ ಲೋಕಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದಲ್ಲಿ ಅವರ ಬಾಯಿಗೆ ಬೀಗ ಹಾಕಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next