Advertisement

ಆತ್ಮಹತ್ಯೆಗೆ ಯತ್ನಿಸುವ ವೇಳೆ ಬುದ್ಧಿವಾದ: ಯುವಕನಿಂದ ರಾಡ್‌ನಿಂದ ದಾಳಿ

09:22 PM Jul 20, 2022 | Vishnudas Patil |

ಸಾಗರ : ತಾಲೂಕಿನ ಬೆಳೆಯೂರು ಗ್ರಾಮದಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಸುತ್ತಿದ್ದ ಸಂದರ್ಭ ಬುದ್ಧಿವಾದ ಹೇಳಿದ ಹಿರಿಯರೊಬ್ಬರಿಗೆ ಯುವಕ ರಾಡ್‌ನಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳೆಯೂರಿನ ರಾಜೀವ (36) ಮಂಗಳವಾರ ಗ್ರಾಮದ ತೋಟವೊಂದರ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ಗಮನಿಸಿ ತಡೆಯುತ್ತಿದ್ದ ಸಂದರ್ಭ ಶೇಷಗಿರಿ ಎಂಬ ಹಿರಿಯರು ರಾಜೀವನಿಗೆ ಬುದ್ಧಿವಾದ ಹೇಳಿದ್ದಾರೆ. ಆಗ ಶೇಷಗಿರಿಯವರಿಗೆ ರಾಜೀವ ರಾಡ್‌ನಿಂದ ಹೊಡೆದಿದ್ದಾನೆ.

ಹಲ್ಲೆಗೊಳಗಾದ ಶೇಷಗಿರಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮಾಂತರ ಠಾಣೆಗೆ ಶೇಷಗಿರಿ ಬುಧವಾರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next