Advertisement

ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ

11:55 AM Jan 14, 2023 | Team Udayavani |

ಬೆಂಗಳೂರು: ಬಾಕಿ ಉಳಿಸಿಕೊಂಡದ್ದ ಸಾಲ ಕೇಳಿದಕ್ಕೆ ಕಾಂಡಿಮಂಟ್ಸ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೆಂಗೇರಿ ಉಪನಗರದ ಸಲ್ಮಾನ್‌ ಟಿಪ್ಪು(28) ಬಂಧಿತ. ಜ.10 ರಂದು ಕೆಂಗೇರಿ ಉಪನಗರದ 6ನೇ ಮುಖ್ಯರಸ್ತೆಯ ಚೌಡೇಶ್ವರಿ ಕಾಂಡಿಮೆಂಟ್ಸ್‌ ಮಾಲೀಕ ಜಿ.ವಿ. ಶಿವಕುಮಾರ್‌ ಎಂಬುವರ ಮೇಲೆ ಆರೋಪಿ ತನ್ನ ಮೂವರು ಸಹಚರ ಜತೆ ಸೇರಿಕೊಂಡು ಹಲ್ಲೆ ನಡೆಸಿದ್ದ. ಶಿವಕುಮಾರ್‌ರ ಕಾಂಡಿಮೆಂಟ್ಸ್‌ಗೆ ಆರೋಪಿ ಟಿಪ್ಪು ಆಗಾಗ್ಗೆ ಹೋಗುತ್ತಿದ್ದ. ಸಿಗರೇಟ್‌ ತೆಗೆದುಕೊಂಡು ಸಾಲ ಹೇಳುತ್ತಿದ್ದ. ಜ.10ರಂದು ಅಂಗಡಿಗೆ ಬಂದ ಆರೋಪಿ, ಟೀ, ಸಿಗರೇಟ್‌ ಕೊಡುವಂತೆ ಕೇಳಿದ್ದಾನೆ. ಆಗ ಶಿವಕುಮಾರ್‌ ಬಾಕಿ 950 ರೂ. ಸಾಲ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿ ತನ್ನ ಬಳಿಯೇ ಹಣ ಕೇಳಿತ್ತೀಯಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಸಂಜೆ ಆರು ಗಂಟೆ ಸುಮಾರಿಗೆ ತನ್ನ ಮೂವರು ಸಹಚರರ ಜತೆ ಸೇರಿ ಮತ್ತೆ ಟೀ ಅಂಗಡಿ ಬಳಿ ಬಂದು ಗಲಾಟೆ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಮತ್ತು ಸಹಚರರ ಶಿವಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಅದನ್ನು ತಡೆಯಲು ಬಂದ ಪತ್ನಿ ಮತ್ತು ಐದು ವರ್ಷದ ಮಗನ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next