Advertisement

Attack ಜನರ ಸೇವೆ ಮಾಡುವ ನನ್ನ ಸಂಕಲ್ಪ ಹೆಚ್ಚಿಸಿದೆ: ಸಿಎಂ ಜಗನ್‌

12:55 AM Apr 16, 2024 | Team Udayavani |

ಹೈದರಾಬಾದ್‌: “ನನ್ನ ಮೇಲೆ ನಡೆದ ದಾಳಿಯು ಜನರ ಸೇವೆ ಮಾಡುವ ನನ್ನ ಸಂಕಲ್ಪವನ್ನು ಹೆಚ್ಚಿಸಿ ದೆಯೇ ಹೊರತು ಕಡಿಮೆ ಮಾಡಿಲ್ಲ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ, ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಹೇಳಿದರು.

Advertisement

ವಿಜಯವಾಡದಲ್ಲಿ ಶನಿವಾರ ವೈಎಸ್‌ಆರ್‌ಸಿಪಿ ಪ್ರಚಾರದ ವೇಳೆ ಕಿಡಿಗೇಡಿಯೊಬ್ಬ ಜಗನ್‌ಮೋಹನ್‌ ರೆಡ್ಡಿ ಮೇಲೆ ಕಲ್ಲು ತೂರಿದ. ಇದರಿಂದ ಅವರ ಹಣೆಗೆ ಪೆಟ್ಟಾಯಿತು. ಕೃಷ್ಣಾ ಜಿಲ್ಲೆಯ ಗುಡಿವಾಡ ಪಟ್ಟಣ ದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ನನ್ನ ಹಣೆ ಮೇಲೆ ಆದ ಗಾಯವು 10 ದಿನಗಳಲ್ಲಿ ವಾಸಿಯಾ ಗಬಹುದು. ಆದರೆ ಚಂದ್ರಬಾಬು ನಾಯ್ಡು ಅವರು ಬಡವರಿಗೆ ಮಾಡಿರುವ ಗಾಯವು ಶಾಶ್ವತವಾಗಿ ಉಳಿಯಲಿದೆ’ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next