Advertisement

ವಿಜಯಪುರ: ‌ಎಟಿಎಂ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಚೋರ

02:16 PM Jul 27, 2022 | Team Udayavani |

ವಿಜಯಪುರ: ರಾತ್ರಿವೇಳೆ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಗಸ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು, ಸೆರೆಯಾದ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದಿದೆ.

Advertisement

ತಿಕೋಟಾ ಪಟ್ಟಣದ ಶ್ರೀಬಸವೇಶ್ವರ ವೃತ್ತದ ಬಳಿ ಇರುವ ಇಂಡಿಯಾ ಒನ್ ಎಟಿಎಂ ಕೇಂದ್ರದಲ್ಲಿ ಸ್ಥಳೀಯ ವ್ಯಕ್ತಿಯೇ ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದಿದ್ದಾನೆ.

ಕಳ್ಳತನಕ್ಕೆ ಮುನ್ನ ತನ್ನ ಗುರುತು ಪತ್ತೆ ಆಗದಿರಲಿ ಎಂದು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಂದ ಮುಖ ಮುಚ್ಚಿಕೊಂಡು, ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಸಿಸಿ ಕೆಮೆರಾ ನಾಶ ಮಾಡಲು ಮುಂದಾಗಿದ್ದಾನೆ.

ಸೆರೆ ಸಿಕ್ಕಿರುವ ಆರೋಪಿಯನ್ನು ಮಲ್ಲಿಕಾರ್ಜುನ ಮಾಳಿ ಎಂಬ ಸ್ಥಳೀಯ ನಿವಾಸಿ ಎಂದು ಗುರುತಿಸಲಾಗಿದೆ.

ರಾತ್ರಿ ವೇಳೆ ಎಟಿಎಂ ಕೇಂದ್ರಕ್ಕೆ ನುಗ್ಗಿ ಯಂತ್ರವನ್ನು ಹಾನಿ ಮಾಡಿದ್ದಾನೆ. ಇದೇ ವೇಳೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೋಲಿಸ್ ಸಿಬ್ಬಂದಿ ಸುನೀಲ ಪೋತ ಹಾಗೂ ಸಾಬು ಕಾಂಬಳೆ ಅವರು ಎಟಿಎಂ ಕೇಂದ್ರದಲ್ಲಿನ ಸದ್ದು ಕೇಳಿ, ಅನುಮಾನಗೊಂಡು  ಕಾರ್ಯಾಚರಣೆ ನಡೆಸಿದಾಗ ಕಳ್ಳತನ ಮಾಡಲು ಮುಂದಾದುದು ಬೆಳಕಿಗೆ ಬಂದಿದೆ.

Advertisement

ಆರೋಪಿ ಎಟಿಎಂ ಕೇಂದ್ರದಲ್ಲಿನ ಸಿಸಿ ಕ್ಯಾಮರಾ ಒಡೆದು , ಸೇಫ್ ಲಾಕರ್ ಹಾಗೂ ಪಾಸವರ್ಡ್ ಕೀ ಬೋರ್ಡ್ ಗೆ ಹಾನಿ ಮಾಡಿದ್ದಾನೆ.

ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next