Advertisement

ಮಾ.24ರಿಂದ ಕಲ್ಯಾಣದ ಮೊದಲ ಅತಿರುದ್ರಯಾಗ; ಲಕ್ಷಾಂತರ ಭಕ್ತರು ಭಾಗಿ

01:07 PM Mar 14, 2023 | Team Udayavani |

ಕಲಬುರಗಿ: ಸರ್ವ ಜನತೆಯಲ್ಲಿ ಶಾಂತಿ ನೆಮ್ಮದಿಗಾಗಿ, ಜನಕಲ್ಯಾಣಕ್ಕಾಗಿ ಯಾದಗಿರಿ ಜಿಲ್ಲೆಯ ಅಬ್ಬೇತುಮಕೂರಿನಲ್ಲಿ ಮಾ. 24ರಿಂದ 31ರವರೆಗೆ ಅತಿರುದ್ರಯಾಗ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಲ್ಯಾಣ ಜಿಲ್ಲೆಯಲ್ಲಿ ಬರುವ ಕರ್ನಾಟಕ ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಲಕೋಪಲಕ್ಷ ಭಕ್ತವೃಂದ ಸಾಗರೋಪಾದಿಯಲ್ಲಿ ಹರಿದು ಬರುತ್ತದೆ, ವಿಶ್ವಾರಾಧ್ಯಾರ ದರ್ಶನಾರ್ಶಿವಾದ ಭವ ಚಿಂತೆಯನ್ನು ದೂರ ಮಾಡಿಕೊಂಡು ಭವ ರೋಗ ಆಳಿಸಿಕೊಂಡು ಅಂತರಂಗ ಶುದ್ಧಿಗೊಳಿಸಿಕೊಂಡು ಪುಣ್ಯಾತ್ಮರಾಗುತ್ತಾರೆ’ ಎಂದು ತಿಳಿಸಿದರು.

ಒಂದು ಮಾನ್ಯ ಅದ್ದೇಶುಮಕೂರ ವಿಶ್ವಾರಾಧ್ಯರ ದಿವ್ಯಾಗಮನದಿಂದ ಪವಿತ್ರ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಿಗಂದೆತ್ತ ಸಂಬಂಧವಯ್ಯ” ಅಲ್ಲಮನ ವಚನದಂತೆ ಎಲ್ಲಿಯೋ ಕುಮಕೂರಿನಲ್ಲಿ ಅಂತಿಮ ಅದು ಅವಿಮುಕ್ತ ಕ್ಷೇತ್ರವಾಗಿದೆ. ಪರಂಧಾರಮವಾಗಿದೆ ಭೂ ಕೈಲಾಸವಾಗಿದೆ. ಆಧ್ಯಾತ್ಮಿಕ ಪವಾಡ ಪುರುಷ ಅಂಗ ಗುಣಗಳನ್ನು ಅಳಿದ ವಿಶ್ವಾರಾಧ್ಯರಿಂದ ಅಬ್ಬೆತುಮಕೂರ ನಾಡಿನ ಮೂಲೆ ಮೂಲೆಗೂ ಹೆಸರು ವಾಸಿಯಾಗಿದೆ ಎಂದರು.

ವಿಶ್ವಾರಾಧ್ಯರ ಪ್ರತಿಷ್ಠಾಪನೆ ಅಂಗವಾಗಿ ತುಮಕೂರ ಹನ್ನೊಂದು ವರ್ಷಗಳಿಗೊಮ್ಮೆ ಭವ್ಯವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಪರಂಪರಾನುಗತವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಜೀವಿತಾವಧಿಯಲ್ಲಿ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಭರತ್ Vs ಬಾವಾ; ಧರ್ಮಸ್ಥಳ ಅಥವಾ ದರ್ಗಾಕ್ಕೆ ಬಂದು ಆಣೆ ಮಾಡಲಿ: ಸವಾಲೆಸೆದ ಮೊಯ್ದೀನ್ ಬಾವಾ

Advertisement

ಪ್ರತಿಷ್ಠಾಪನೆ ಮಂಗಲ, ಪೂಜೆ, ಅಷ್ಟ ಮಂಗಳ ಲಕ್ಷ್ಮೀ ಕುಬೇರ ಪೂಜೆ ಮುಂತಾದ ಹಲವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ 2013 ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜೆ, ಸ್ಮರಣಾರ್ಥವಾಗಿ ಅಡಿ ಎತ್ತರದ ಮಂದಿರ ಮತ್ತು ವಿಶ್ವಾರಾಧ್ಯರ ಮೂರ್ತಿ ಪ್ರತಿಷ್ಠಾಪನೆ ಲೋಕಾರ್ಪಣೆ ತನಿಮಿತ್ತ ಸಾವಿರಾರು ತುಂಬುವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಬ್ಬೆತುಮಕೂರ ಸಜ್ಜುಗೊಳ್ಳುತ್ತಿದೆ ಎಂದು ಹೇಳಿದರು.

ಮಾರ್ಚ್ 24ರಂದು ಮಧ್ಯಾಹ್ನ 2-00 ಗಂಟೆಗೆ ಸೋಮಂಗಲ ಮಡೆಯನ್ನು ನೇರವೇರಿಸಲಾಗುವುದು. ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಾಯಂಕಾಲ 18 ವಿಶ್ವಾರಾಧ್ಯರ ತೊಟ್ಟಿಲೋತ್ಸವವನ್ನು ನೇರವೇರಿಸಲಾಗುವುದು ಎಂದರು.

ಮಾರ್ಚ್ 25ರಂದು 8-30ಕ್ಕೆ ಅತಿರುದ್ರಯಾಗ ನೇರವೇರುವುದು ಶ್ರೀಶೈಲ, ರಾಮನಗರ, ತಿರುಪತಿಗಳಿಂದ ಆಗಮಿಸುವ 156 ಜನರ ಯತ್ನಜರು ಪೌರೋಹಿತ್ಯವನ್ನು ವಹಿಸುವರು. 108 ಹೋಮ ಕುಂಡಗಳಲ್ಲಿ ದಂಪತಿಗಳಿಂದ ಅತಿರುದ್ರಯಾಗವನ್ನು ನೇರವೇರಿಸಲಾಗುವುದು ಅಪ್ಪ ಮಂಗಲ ಕುಬೇರ ಪೂಜೆಯನ್ನು ದಂಪತಿಗಳು ನಡೆಸಿಕೊಡುವರು ಎಂದರು

ಇದೇ ಮಾರ್ಚ್ ರಿಂದ 31ರ ವರೆಗೆ ನಿರಂತರವಾಗಿ ಅತಿರುದ್ರಯಾಗ ಮಂಗಲ ಪೂಜೆ, ಮಂಗಲ ಲಕ್ಷ್ಮೀ ಕುಬೇರ, ಕಾರ್ಯಕ್ರಮಗಳು ನೇರವೇರಿಸಿಕೊಂಡು ಬರುತ್ತದೆ. 2013 ರಲ್ಲಿ ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜಾ ಮುಂತಾದ ಹತ್ತು ಸ್ಮರಣಾರ್ಥವಾಗಿ ತನಿಮಿತ್ತ ಸಾವಿರಾರು ಮುತ್ತೈದೆಯವರಿಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಲಾಗುತ್ತದೆ ಎಂದು ತಿಳಿಸಿದರು.

ನಿರಂತರ ಒಂದು ವಾರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ ಸಾವಿರ ಜನ ಸೇರಬಹುದೆಂದು ಅಂದಾಜಿಸಲಾಗಿದೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ವ್ಯವಸ್ಥೆಯನ್ನು ಮಾಡಲಾಗುತ್ತದೆ. ತಂಗಲು ಅನುಕೂಲವಾಗುವಂತೆ ವಸತಿ ಸ್ನಾನ ಗೃಹಗಳು, ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಅತಿರುದ್ರಯಾಗ ಮಂಟಪವನ್ನು ಕಾರ್ಮಿಕರು

ಧಾರ್ಮಿಕ ಪರಂಪರೆಯಲ್ಲಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಬೇರೆಪಿಸುವುದು, ಒತ್ತಡದ ಬದುಕಿನಲ್ಲಿ ಮಾನಸಿಕ ಮೂಡಿಸುವುದು, ಜಾತಿ-ಮತಗಳನ್ನು ಮಾನವತೆಯ ನೆಲೆಗಟ್ಟಿನಲ್ಲಿ ಸಮಾನರೆಂಬ ಮೂಡಿಸುವುದು. ಒಳಿತಾಗಿ, ನೆಲೆಸಲಿಯೆಂಬ ಭಾವದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆಯೆಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಡಾ. ಅಜಯ್ ಸಿಂಗ್, ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ್ ಮೆತ್ತಿಕೊಂಡು ಹಾಗೂ ಮಾಜಿ ಶಾಸಕ ಗುರು ಪಾಟೀಲ್, ಡಾ. ಸುಭಾಶ್ಚಂದ್ರ ಹಾಗೂ ಸಿದ್ದಣ್ಣಗೌಡ ಪಾಟೀಲ ಮಳಗಿ ಕಲಬುರಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next