Advertisement

ಬಾಂಗ್ಲಾದಲ್ಲಿ ದೋಣಿ ಮುಳುಗಿ 24 ಮಂದಿ ಸಾವು

10:09 PM Sep 25, 2022 | Team Udayavani |

ಢಾಕಾ: ಮಹಾಲಯ ಅಮವಾಸ್ಯೆಯ ಪೂಜೆಗೆಂದು ಹೊರಟಿದ್ದ 24 ಮಂದಿ ದೋಣಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

Advertisement

ಪಂಚಗರ್‌ ಜಿಲ್ಲೆಯ ಔಲಿಯಾ ಘಾಟ್‌ನಿಂದ ಭದೇಶ್ವರ ದೇಗುಲದ ಕಡೆಗೆ ದೋಣಿ ಹೊರಟಿತ್ತು. ಅದರಲ್ಲಿ ಬೋಡಾ, ಮರಿಯಾ ಮತ್ತು ಬಂಘರಿ ಪ್ರದೇಶದ ಹಿಂದೂಗಳು ಪ್ರಯಾಣಿಸುತ್ತಿದ್ದರು.

ದೋಣಿಯಲ್ಲಿ 30ಕ್ಕೂ ಅಧಿಕ ಮಂದಿಯಿದ್ದರು. ಭಾರ ಹೆಚ್ಚಾದ ಹಿನ್ನೆಲೆ ಅದು ಮುಳುಗಿದೆ. 24 ಮಂದಿ ಸಾವನ್ನಪ್ಪಿದ್ದು, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಕೆಲವರು ಈಜಿಕೊಂಡು ದಡ ತಲುಪಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next