Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

07:35 AM Jan 19, 2022 | Team Udayavani |

ಮೇಷ:

Advertisement

ದೇಹಾರೋಗ್ಯ ಉತ್ತಮ. ಉತ್ತಮ ಉತ್ಸಾಹಶೀಲತೆ. ಸರ್ವವಿಚಾರಗಳಲ್ಲಿ ಆಸಕ್ತಿ. ಪಶುಗಳಲ್ಲಿ ಮಮತೆ. ಕಾಡುಬೆಟ್ಟ ಪ್ರದೇಶಗಳ ಮೂಲಕ ಸಂಚಾರ. ಶತ್ರುಗಳಿಗೆ ಸಿಂಹಸ್ವಪ್ನ. ತೇಜಸ್ವಿ ಎಲ್ಲರೊಂದಿಗೆ ಸಹಕಾರ ಗಾಂಭೀರ್ಯತೆ ಜವಾಬ್ದಾರಿಯುತ ಕಾರ್ಯಶೀಲತೆ.

ವೃಷಭ:

ಅಧ್ಯಯನದಲ್ಲಿ ಆಸಕ್ತಿ. ಪಾಂಡಿತ್ಯ ವೃದ್ಧಿ. ಬಹುಗುಣಗಳ ಪ್ರದರ್ಶನ. ರಾಜಕಾರ್ಯಾಸಕ್ತ ಗಣ್ಯರ ಸಹಾಯ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸ್ಪಲ್ಪ ಲೋಭಿತನ. ಬಂಧುಗಳಿಂದ ಪ್ರೋತ್ಸಾಹ.

ಮಿಥುನ:

Advertisement

ಉತ್ತಮ ಆರೋಗ್ಯ. ಸರಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗಣ್ಯರಿಂದ ಸಮ್ಮಾನ. ವಾಕ್‌ಚತುರತೆ ವಿಚಾರಕ್ಕೆ ಸರಿಯಾದ ಚರ್ಚೆ. ಪಾಂಡಿತ್ಯ ಪ್ರದರ್ಶನ. ಕ್ಷಮಾಗುಣ ಸರ್ವವಿಧದ ಯುಕ್ತಿಗಳನ್ನು ಒಳಗೊಂಡ ಕಾರ್ಯವೈಖರಿ. ಧನ ಸಂರಕ್ಷಣೆ‌.

ಕಟಕ:

ಸುದೃಢ ಆರೋಗ್ಯ. ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಏರಿಳಿತ. ಅಧಿಕಾರ ಚಲಾಯಿಸುವ ಹಂಬಲತೆ. ದೂರದ ವ್ಯವಹಾರಗಳಿಂದ ಧನವೃದ್ಧಿ. ಬಂಧುಮಿತ್ರರೊಂದಿಗೆ ಪ್ರಯಾಣ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ.

ಸಿಂಹ:

ಆರೋಗ್ಯ ವೃದ್ಧಿ. ಸುಖ ದುಃಖ ಸಹಿಷ್ಣುತೆ. ಪರರ ದ್ರವ್ಯಗಳಲ್ಲಿ ವ್ಯವಹರಿಸುವ ಅವಕಾಶ ಅತೀ ಬುದ್ಧಿವಂತಿಕೆ. ಉದ್ಯೋಗ ವ್ಯವಹಾರಗಳಲ್ಲಿ ತತ್ಪರತೆ. ಹೆಚ್ಚಿದ ಧನ ಸಂಪಾದನೆ. ಎಲ್ಲರಿಂದಲೂ ಗೌರವ ಸಂಪಾದಿಸಲು ಪ್ರಯತ್ನ. ಸಹೋದ್ಯೋಗಿಗಳಿಂದ ಸಹಕಾರ.

ಕನ್ಯಾ:

ಉತ್ತಮ ಆರೋಗ್ಯ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಸದಾ ಸುಖೀಯಾಗಲು ಅಪೇಕ್ಷೆ. ಸಂದಭೋìಚಿತ ಉಪಾಯ ಪ್ರದರ್ಶನ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ದಂಪತಿಗಳು ಪರಸ್ಪರ ಸಹಕರಿಸಿ.

ತುಲಾ:

ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಉದ್ಯೋಗ ವ್ಯವಹಾರಗಳಲ್ಲಿ ಚುರುಕುತನ ಅತೀ ಬುದ್ಧಿವಂತಿಕೆ ಕಂಡೀತು. ಪಾರದರ್ಶಕತೆಗೆ ಆದ್ಯತೆ ನೀಡಿ. ರಾಜಕೀಯ ಕಾರ್ಯಗಳಲ್ಲಿ ಆಸಕ್ತಿ. ನೃತ್ಯ ಸಂಗೀತಾದಿಗಳಿಂದ ಸಂತೋಷ ಲಭಿಸುವುವು.

ವೃಶ್ಚಿಕ:

ಸ್ಥಿರ ಸುದೃಢ ಆರೋಗ್ಯ. ಸಮಾಜದಲ್ಲಿ ಗಣ್ಯರಿಂದ ಪುರಸ್ಕೃತ. ಅಧಿಕಾರಯುತ ಜೀವನ ಶೈಲಿ. ಕ್ರೂರ ಸಾಮ್ಯತೆ ವ್ಯಕ್ತಿತ್ವ ಸಂದಭೋìಚಿತವಾಗಿ. ಹಿಡಿದ ಕಾರ್ಯ ಮುಗಿಸುವ ಛಲ. ನಿರಂತರ ಉದ್ಯಮಶೀಲತೆ. ಅನೇಕ ರೀತಿಯಲ್ಲಿ ಬಹು ಧನ ಸಂಪಾದನೆ.

ಧನು:

ಉತ್ತಮ ಆರೋಗ್ಯ. ಸಹೋದರರಿಂದ ಸಂತೋಷ. ಉದಾರತೆಯ ಕಾರ್ಯ ಪ್ರವೃತ್ತಿಯಿಂದ ಜನಮನ್ನಣೆ. ಕೀರ್ತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನ ಸಂಪತ್ತಿನ ವಿಚಾರದಲ್ಲಿ ಗಣನೀಯ ವೃದ್ಧಿ.

ಮಕರ:

ಆರೋಗ್ಯ ಗಮನಿಸಿ. ಆಸ್ತಿ ವಿಚಾರಗಲ್ಲಿ ತಾಳ್ಮೆಯ ನಡೆ ಅಗತ್ಯ. ಬಂಧುಗಳ ಜವಾಬ್ದಾರಿ ತೋರಿಸಿ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಪ್ರಗತಿ. ಸಹೋದ್ಯೋಗಿಗಳಿಂದ ಸಂತೋಷ ವೃದ್ಧಿ. ಮಕ್ಕಳ ವಿಚಾರದಲ್ಲಿ ಪ್ರಗತಿ.

ಕುಂಭ:

ಸುದೃಢ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಉತ್ತಮ ಅಭಿವೃದ್ಧಿದಾಯಕ ಬದಲಾವಣೆ ಸಂಭವ. ನಿರೀಕ್ಷಿತ ಧನಾರ್ಜನೆ. ಸಹೋದರಾದಿ ಸುಖ ಪ್ರಾಪ್ತಿ. ಆಸ್ತಿ ವಿಚಾರಗಳಲ್ಲಿ ದುಡುಕುತನದಿಂದ ನಷ್ಟ ಸಂಭವ.

ಮೀನ:

ಆರೋಗ್ಯ ವೃದ್ಧಿ ಆದರೂ ನಿರ್ಲಕ್ಷ್ಯ ತೋರದಿರಿ.ಜನಪದರೊಂದಿಗೆ ಸರಿಯಾದ ಸಂಬಂಧ ಬೆಳೆಸಿದರೆ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಿಗೆ ಧನ ವ್ಯಯ. ಅನ್ಯರ ಸಹಾಯ ನಿರೀಕ್ಷಿಸದಿರಿ. ಸಾಂಸಾರಿಕ ಸುಖ ವೃದ್ಧಿ ಪರಿಶ್ರಮಕ್ಕೆ ತಕ್ಕ ಸಂಪತ್ತು ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next