Advertisement

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:03 AM Jun 09, 2022 | Team Udayavani |

ಮೇಷ:

Advertisement

ನಿರೀಕ್ಷಿತ ಧನಾಗಮ. ಆರೋಗ್ಯ ಗಮನಿಸಿ. ಸಂದಭೋìಚಿತ ವಿಚಾರದಿಂದ ಸಹೋದರಾದಿ ಸುಖ. ಗೃಹ ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ.

ವೃಷಭ:

ಹೆಚ್ಚಿನ ಧನಾಗಮ. ಬಂಧುಮಿತ್ರರ ಸಹಾಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ನಿಪುಣತೆ. ಸ್ಪರ್ಧಾತ್ಮಕ ಮನೋಭಾವ. ಸಾಂಸಾರಿಕ ಸುಖ ಮಧ್ಯಮ. ಧರ್ಮಕರ್ಮದಲ್ಲಿ ಶ್ರೇಯಸ್ಸು . ನಿರೀಕ್ಷೆಗೂ ಮೀರಿದ ಸ್ಥಾನ ಲಾಭ.

ಮಿಥುನ:

Advertisement

ಉತ್ತಮ ಸುದೃಢ ಆರೋಗ್ಯ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ವರಮಾನ. ಸಹೋದರಾದಿ ಸುಖ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದ ಮುನ್ನಡೆ. ಅಧ್ಯಯನ ನಿಮಿತ್ತ ಪ್ರಯಾಣ. ವ್ಯವಹಾರದಲ್ಲಿ ಉತ್ತಮ ಬದಲಾವಣೆ.

ಕರ್ಕ:

ಉತ್ತಮ ಆರೋಗ್ಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಸ್ಪರ್ಧೆಯಲ್ಲಿ ಜಯ. ಧಾರ್ಮಿಕ ಆಚರಣೆಯಲ್ಲಿ ತಲ್ಲೀನತೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮ. ಪರಿಶ್ರಮದಿಂದ ಧನಾರ್ಜನೆ.

ಸಿಂಹ:

ಸುಸ್ಥಿರ ಆರೋಗ್ಯ. ಉತ್ತಮ ಧನಾರ್ಜನೆ. ಧೈರ್ಯ ಶೌರ್ಯ ಪ್ರದರ್ಶನ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸೌಕರ್ಯ ಪ್ರಾಪ್ತಿ. ಧಾರ್ಮಿಕ ಕಾರ್ಯಾಸಕ್ತಿ. ವ್ಯವಹಾರ, ಆರೋಗ್ಯದಲ್ಲಿ ಸಂದಭೋìಚಿತ ನಿರ್ಣಯ.

ಕನ್ಯಾ:

ಆಸ್ತಿ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ ಜಾಗ್ರತೆ ಅಗತ್ಯ. ಅಧ್ಯಯನ ಪ್ರಗತಿದಾಯಕ. ಸ್ಪರ್ಧಿಗಳಿಂದ ತೊಂದರೆ ಸಂಭವ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಬದಲಾವಣೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ತುಲಾ:

ಪರರ ಸಹಾಯದಿಂದ ಬಹು ಲಾಭ ಸಂಭವ. ಶಾಸ್ತ್ರ ಆಸಕ್ತಿ. ಸರಸ ಸಲ್ಲಾಪದಲ್ಲಿ ಆಸಕ್ತಿ. ದೂರದ ವ್ಯವಹಾರದಲ್ಲಿ ಹೆಚ್ಚಿನ ಧನಲಾಭ. ದೇವತಾ ಪೂಜೆ ಪುನಸ್ಕಾರಗಳಲ್ಲಿ ಸಕ್ರಿಯತೆ. ಸಂಗೀತ ಸಾಹಿತ್ಯ ಕಲೆಗಳಲ್ಲಿ ಆಸಕ್ತಿ.

ವೃಶ್ಚಿಕ:

ನಿರೀಕ್ಷಿತ ಸ್ಥಾನ ಸುಖ. ಎಲ್ಲ ವಿಚಾರಗಳಲ್ಲಿ ಲಾಭದ ನಿರೀಕ್ಷೆ. ಪ್ರಸಿದ್ಧಿಗೆ ಪರಿಶ್ರಮ. ಆಸ್ತಿ ವಿಚಾರಗಳಿಂದ ಅನಿರೀಕ್ಷಿತ ಧನಾಗಮ. ಮಕ್ಕಳಿಂದ ಸಂತೋಷ. ಗುರುಹಿರಿಯರಿಂದ ಸಹಕಾರ. ವಿದ್ಯೆಯ ನಿಮಿತ್ತ ಬಹುಜನ ಸಂಪರ್ಕ.

ಧನು:

ಅಭಿವೃದ್ಧಿ ಆರೋಗ್ಯ. ಬುದ್ಧಿವಂತಿಕೆ ತಿಳುವಳಿಕೆಯಿಂದ ಕೂಡಿದ ಸ್ಥಿರ ಬುದ್ಧಿ ಪ್ರದರ್ಶನ. ಹಣಕಾಸಿನ ವಿಚಾರದಲ್ಲಿ ಕೃಪಣತೆ. ಸಣ್ಣ ಪ್ರಯಾಣ. ವಿದ್ಯಾರ್ಥಿಗಳಿಗೆ ಗುರುಗಳ ಉತ್ತಮ ಮಾರ್ಗದರ್ಶನದ ಲಾಭ. ನಾಯಕತ್ವ ಗುಣ ವೃದ್ಧಿ.

ಮಕರ:

ಶಾರೀರಿಕ ಸುಖ ವೃದ್ಧಿ. ಸುಂದರತೆಗೆ ಪ್ರಾಧಾನ್ಯತೆ. ಚಂಚಲ ಮನಃಸ್ಥಿತಿ. ಗಣ್ಯ ವ್ಯಕ್ತಿಗಳ ಸಂಪರ್ಕ. ಗುಪ್ತ ಧನ ವೃದ್ಧಿ. ಏಕಾಗ್ರತೆಯಿಂದ ಕೂಡಿದ ಉದ್ಯೋಗ ವ್ಯವಹಾರ. ಧಾರ್ಮಿಕ ಕಾರ್ಯಗಳಿಗೆ ಅಡಚಣೆ.

ಕುಂಭ:

ಪರಿಶ್ರಮದಿಂದ ಆರೋಗ್ಯ ಸುದೃಢ. ತಾಳ್ಮೆ ಸಹನೆ ಅಗತ್ಯ. ಉದ್ಯೋಗದಲ್ಲಿ ಆಕಸ್ಮಾತ್‌ ಧನವೃದ್ಧಿ. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ಪ್ರಯಾಣ ಸಂಭವ. ದೇವತಾ ಮಂತ್ರ ಅನುಷ್ಠಾನದಿಂದ ನೆಮ್ಮದಿ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸರಿಯಾಗಿ ಸಿಕ್ಕಿದ ಸ್ಥಾನಮಾನ.

ಮೀನ:

ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೂರ ಪ್ರಯಾಣದಿಂದ ವ್ಯರ್ಥ ಧನವ್ಯಯ ಸಂಭವ. ಆದರೆ ಸತ್ಕರ್ಮದಿಂದಲೂ ಜನಮನ್ನಣೆಯಿಂದ ಗೌರವದಿಂದ ಕೂಡಿದ ಧನಾಗಮ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಗುರುಹಿರಿಯರ ಸಂದಭೋìಚಿತ ಸಹಾಯ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next