Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:33 AM Jan 25, 2022 | Team Udayavani |

ಮೇಷ:

Advertisement

ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರರಿಂದ ಸಹಾಯ ಅವಲಂಬನೆ ಆದರೆ ಪಾರದರ್ಶಕತೆಗೆ ಆದ್ಯತೆ ಇರಲಿ. ನಿರಂತರ ಧನಸಂಪತ್ತು ವೃದ್ಧಿ. ಹಿರಿಯರ ಆರೋಗ್ಯ ಸಮಾಧಾನಕರ.

ವೃಷಭ:

ಆರೋಗ್ಯ ವೃದ್ಧಿ. ಮಾನಸಿಕ ತೃಪ್ತಿ ಸಮಾಧಾನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಯುತವಾದ ವರ್ತನೆ. ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ಕಾರ್ಯವೈಖರಿ. ಸಹೋದ್ಯೋಗಿಗಳ ಆತ್ಮೀಯತೆ.

ಮಿಥುನ:

Advertisement

ಸುದೃಢ ಆರೋಗ್ಯ. ಬಹುಗುಣವಂತಿಕೆ ವಾಕ್‌ಚತುರತೆ ಕ್ಷಮಾ ಸ್ವಭಾವದಿಂದ ವ್ಯವಹರಿಸಿ ಜನಪ್ರಿಯತೆ. ಸಂದರ್ಭಕ್ಕೆ ಸರಿಯಾಗಿ ಎಲ್ಲರ ಸಹಾಯ ಸಹಕಾರದಿಂದ ನಿರೀಕ್ಷಿತ ಗುರಿ ಸಾಧನೆ. ಆಸ್ತಿ ಸಂಚಯನ.

ಕಟಕ:

ವಾರಾರಂಭದಲ್ಲಿ ಮಾನಸಿಕ ಒತ್ತಡ ತೋರಿದರೂ ವಾರಾಂತ್ಯದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆ. ತಾಳ್ಮೆ ವಿವೇಕದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ.

ಸಿಂಹ:

ಆರೋಗ್ಯ ಸುಧಾರಣೆ. ಮಕ್ಕಳ ವಿಷಯದಲ್ಲಿ ಜಾಗೃತೆಯಿಂದಿರಿ. ಅನಿರೀಕ್ಷಿತ ಧನಾಗಮನ ಸಂಭವ. ಹಿರಿಯರ ಆರೋಗ್ಯ ಗಮನಿಸಿ. ದೇವತಾ ಕಾರ್ಯಗಳಿಗೆ ಧನವ್ಯಯ ಮಾಡಿದ ತೃಪ್ತಿ. ಬಂಧುಮಿತ್ರರ ಭೇಟಿ.

ಕನ್ಯಾ:

ಆರೋಗ್ಯ ಸುದೃಢ. ಉತ್ತಮ ವಾಕ್‌ಚತುರತೆಯಿಂದ ಕೆಲಸ ಕಾರ್ಯಗಳಲ್ಲಿ ಜಯ. ಸಂಸಾರದಲ್ಲಿ ತಾಳ್ಮೆ ಇರಲಿ. ಉತ್ತಮ ಧನಲಾಭ. ಗೌರವದಿಂದ ಕೂಡಿದ ಸ್ಥಾನಮಾನ ಪ್ರಾಪ್ತಿ. ಗುರುಹಿರಿಯರ ಆರೋಗ್ಯದಲ್ಲಿ ಚೇತರಿಕೆ.

ತುಲಾ:

ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಸಂತೋಷ. ನಿರೀಕ್ಷಿಸಿದ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ:

ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನ ಪ್ರವೃತ್ತಿ ಸಲ್ಲದು. ನೂತನ ಮಿತ್ರರ ಭೇಟಿ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ಗೃಹೋಪಕರಣ ವಸ್ತುಗಳ ಖರೀದಿ.

ಧನು:

ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಗುರಿ ಸಾಧಿಸಿರಿ.

ಮಕರ:

ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಮಕ್ಕಳ ಬಗ್ಗೆ ಹೆಚ್ಚಿದ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಮಯ.

ಕುಂಭ:

ದೀರ್ಘ‌ ಪ್ರಯಾಣದಲ್ಲಿ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನ ಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ.

ಮೀನ:

ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲಾತಿಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಆರೋಗ್ಯ ಗಮನಿಸಿ.

Advertisement

Udayavani is now on Telegram. Click here to join our channel and stay updated with the latest news.

Next