Advertisement

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:30 AM Feb 03, 2022 | Team Udayavani |

ಮೇಷ:

Advertisement

ಗಣಿ, ಧಾತು ಇತ್ಯಾದಿ ಲೋಹ ವ್ಯವಹಾರದಲ್ಲಿ ಪ್ರಗತಿ. ಪ್ರಾಮಾಣಿಕತೆ ಯಿಂದ ಜನಮನ್ನಣೆ. ಅನಿರೀಕ್ಷಿತ ಧನಾಗಮ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ವೃಷಭ:

ಸರಕಾರಿ ಕಾರ್ಯಗಳಲ್ಲಿ ನಿರೀಕ್ಷಿತ ಸಾಧನೆ. ಕೃಷಿಕರಿಗೆ, ಹೈನುಗಾರರಿಗೆ, ಪಶು ಪಕ್ಷಿ ಸಾಕಣೆಗಾರರಿಗೆ ಲಾಭಕರ. ವಿದ್ಯಾರ್ಥಿಗಳು ಬದಲಾವಣೆಯಲ್ಲಿ ಗಮನಹರಿಸಿ. ಗುರುಗಳ ಮಾರ್ಗದರ್ಶನ ಪಾಲಿಸಿ. ಮಿತ್ರರಿಂದ ಸಹಕಾರ.

ಮಿಥುನ:

Advertisement

ಉದ್ಯೋಗದಲ್ಲಿ ಅಭಿವೃದ್ಧಿ. ದಾಕ್ಷಿಣ್ಯ ಕಠೊರತೆ ಪ್ರವೃತ್ತಿಯಿಂದ ವ್ಯವಹರಿಸದಿರಿ. ಪಾಲುದಾರರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸಹಕರಿಸಿ. ಹಣಕಾಸಿನ ವಿಚಾರ ದಲ್ಲಿ ಎಚ್ಚರಿಕೆ ವಹಿಸಿ.

ಕಟಕ:

ಜಲೋತ್ಪನ್ನ ವಸ್ತುಗಳಿಂದ ಲಾಭ. ಚುರುಕು ಬುದ್ಧಿ, ಸಕಾರಾತ್ಮಕ ಚಿಂತನೆ, ತಂತ್ರಗಾರಿಕೆಯಿಂದ ಕಾರ್ಯ ಸಿದ್ಧಿ. ಧನಾರ್ಜನೆಗೆ ಕೊರತೆ ಇರದು. ಮಾತೃ ಸಮಾನರ ಆರೋಗ್ಯದ ಕಡೆಗೆ ಗಮನಹರಿಸಿ. ಭೂ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ:

ವಿದ್ಯಾರ್ಥಿಗಳು ಸ್ವಂತ ನಿರ್ಣಯ ಮಾಡದೇ ಗುರುಹಿರಿಯರ ಮಾರ್ಗದರ್ಶನ ದಂತೆ ನಡೆದುಕೊಳ್ಳಿ. ದಾಖಲಾತಿ ಒಡಂಬಡಿಕೆಯಲ್ಲಿ ಜಾಗ್ರತೆ ವಹಿಸುವುದರಿಂದ ಭೂಮಿ, ವಾಹನ, ಗೃಹ ಕ್ರಯವಿಕ್ರಯದಲ್ಲಿ ಯಶಸ್ಸು.

ಕನ್ಯಾ:

ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿದರೂ ದಾಕ್ಷಿಣ್ಯ ಪ್ರವೃತ್ತಿಯಿಂದ ಸಮೀಪದ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ದೂರದ ವ್ಯವಹಾರದಲ್ಲಿ ಪ್ರಗತಿ. ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ತುಲಾ:

ಆರೋಗ್ಯ ವೃದ್ಧಿ. ಆರ್ಥಿಕ ವಿಚಾರದಲ್ಲಿ ಅತಿ ಆಸೆ ಮಾಡದೆ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲ ರಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಧನಾರ್ಜನೆಗೆ ಕೊರತೆ ಇಲ್ಲ . ವ್ಯಾಪಾರ ವಹಿವಾಟುಗಳಲ್ಲಿ ಅಭಿವೃದ್ಧಿ.

ವೃಶ್ಚಿಕ:

ಉತ್ತಮ ಜನಮನ್ನಣೆ. ನಿರೀಕ್ಷೆ ಗಿಂತಲೂ ಹೆಚ್ಚಿನ ಧನಾಗಮ. ಪ್ರಯಾಣ ದಿಂದ ಲಾಭ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ತೃಪ್ತಿ. ಬಂಧುಮಿತ್ರರಿಂದ ಪ್ರೋತ್ಸಾಹ. ಅಧ್ಯಯನಶೀಲರಿಗೆ ದೇಶ ವಿದೇಶ ಸಂಸ್ಥೆಗಳಲ್ಲಿ ಅವಕಾಶ.

ಧನು:

ಉತ್ತಮ ಜನರ ಒಡನಾಟದಿಂದ ಸಂತೋಷ. ನೂತನ ವ್ಯವಹಾರಕ್ಕೆ ಅವಕಾಶ. ಸ್ಥಾನಮಾನಕ್ಕೆ ಧನಾರ್ಜನೆಗೆ ಕೊರತೆ ಇರದು. ಗುರುಹಿರಿಯರೊಂದಿಗೆ, ಶಿಷ್ಯರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ.

ಮಕರ:

ಜಲೋತ್ಪನ್ನ ವಸ್ತುಗಳ  ಕ್ರಯ ವಿಕ್ರಯ ದಿಂದ ಲಾಭ. ದೂರ ಪ್ರಯಾಣದಿಂದಲೂ ಪಾಲುದಾರಿಕಾ ವ್ಯವಹಾರದಿಂದಲೂ ಆರ್ಥಿಕ ಲಾಭ. ನಿರೀಕ್ಷಿತ ಸ್ಥಾನಮಾನದಿಂದ ಸಮಾಧಾನ. ಅಧ್ಯಯನಶೀಲರಿಗೆ ಉತ್ತಮ ಅನುಕೂಲಕರ ಸಮಯ.

ಕುಂಭ:

ಅನ್ಯರ ಸಹಾಯಕ ನಿರೀಕ್ಷಿಸದಿರಿ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ವಿದೇಶ ಮೂಲದ ಬಂಧು ಮಿತ್ರರಿಂದ ಸಂತಸದ ಸುದ್ದಿ . ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಮೀನ:

ಕಾರ್ಯ ನಿಮಿತ್ತ ದೀರ್ಘ‌ ಪ್ರಯಾಣದಿಂದ ಲಾಭ. ಅಧ್ಯಯನಶೀಲರಿಗೆ ದೇಶ ವಿದೇಶ ಸಂಸ್ಥೆಗಳಲ್ಲಿ ಪ್ರಯತ್ನಿಸಿದರೆ ಅವಕಾಶ ಲಭಿಸುವುದು. ಆರೋಗ್ಯದ ಬಗ್ಗೆ ಗಮನಹರಿಸಿ. ಮಿತ್ರರಿಂದ, ಮಾತೃ ಸಮಾನರಿಂದ ಪ್ರೋತ್ಸಾಹ. ದೇವತಾ ಕಾರ್ಯದಲ್ಲಿ ಭಾಗಿಯಾದ ತೃಪ್ತಿ. ಉತ್ತಮ ಧನಾರ್ಜನೆ.

Advertisement

Udayavani is now on Telegram. Click here to join our channel and stay updated with the latest news.

Next