Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:21 AM Jun 20, 2022 | Team Udayavani |

ಮೇಷ:

Advertisement

ಚುರುಕು ಬುದ್ಧಿ ಇದ್ದರೂ ಸ್ವಾಭಿಮಾನ ಶಾಂತ ಸ್ವಭಾವದಿಂದ ಕೂಡಿದ ಕಾರ್ಯವೈಖರಿ ಸಫ‌ಲತೆ, ರಾಜಕೀಯ ವಿಚಾರದಲ್ಲಿ ಬೇಸರವಿದ್ದರೂ ಸ್ಥಾನಮಾನ ಪ್ರಾಪ್ತಿ. ಹಿರಿಯರಲ್ಲಿ ವಿಶೇಷ ಪ್ರೀತಿ. ವಿದ್ಯಾರ್ಥಿಗಳಿಗೆ ನಾನಾ ಸೌಕರ್ಯದಿಂದ ಕೂಡಿದ ಸಮಯ.

ವೃಷಭ:

ಗೃಹೋಪಕರಣ ವಸ್ತು ಸಂಗ್ರಹ. ಧನಾರ್ಜನೆಗೆ ಕೊರತೆ ಇರದು. ದಾನ ಧರ್ಮದಿಂದ ತೃಪ್ತಿ ಮಕ್ಕಳಿಂದ ಸುಖ. ಮಿತ್ರರು, ಸಹೋದರ ಸಹೋದರಿಯರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ. ಪಶುಸಂಗೋಪನೆಯಲ್ಲಿ ಪ್ರಗತಿ.

ಮಿಥುನ:

Advertisement

ಪುರುಷ ಸ್ತ್ರೀಯಿಂದ ಪರಸ್ಪರ ಪ್ರೋತ್ಸಾಹ. ಆತ್ಮಸ್ಥೈರ್ಯ ಉತ್ತಮ. ಜನರ ಒಡನಾಟದಿಂದ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಬರಹಗಾರರಿಗೆ ಅಭಿವೃದ್ಧಿದಾಯಕ ಅವಕಾಶಗಳು ಲಭಿಸಲಿವೆ.

ಕರ್ಕ:

ದೇವತಾ ಕಾರ್ಯದಲ್ಲಿ ಶ್ರದ್ಧೆ ಭಕ್ತಿ ಪೂರ್ವಕ ನಿಮ್ಮನ್ನು ತೊಡಗಿಸಿಕೊಂಡು ಸಂತೋಷಪಡುವ ಸಮಯ. ಪಾಲುದಾರಿಕಾ ವ್ಯವಹಾರದಲ್ಲಿ ಭೂಮಿ ವಾಹನಾದಿ ವಿಚಾರಗಳಲ್ಲಿ, ಸರಕಾರಿ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮ.

ಸಿಂಹ:

ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ಮೇಲಧಿಕಾರಿಗಳ ಗಮನಕ್ಕೆ ಒಳಗಾಗುವಿರಿ. ಸರಿಯಾಗಿ ವಿವೇಕತೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಉತ್ತಮ ಪ್ರಗತಿ ನಿಮ್ಮದಾಗಿಸಿಕೊಳ್ಳಿ ದೂರ ಪ್ರಯಾಣಕ್ಕೆ ಅವಕಾಶ ಒದಗುವುದು.ನಿರೀಕ್ಷಿತ ಧನಾಗಮ.

ಕನ್ಯಾ:

ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೃಪ್ತಿ. ಪಾಲುದಾರಿಕಾ ವ್ಯವಹಾರದಲ್ಲಿ ಸೂಕ್ಷ್ಮ ಗಮನಿಸಿ. ಉತ್ತಮ ಧನಾಗಮವಿದ್ದರೂ ಖರ್ಚು ನಿಗಾವಿರಲಿ.

ತುಲಾ:

ಉತ್ತಮ ಆಲೋಚನೆಯಿಂದಲೂ ರಂಜಿಸುವ ಗುಣದಿಂದ ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅನಿರೀಕ್ಷಿತ ಧನಾಗಮ, ಕೀರ್ತಿ, ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರ ಅಭಿವೃದ್ಧಿ. ದಾಂಪತ್ಯ ಸುಖ ತೃಪ್ತಿ. ಆತ್ಮವಿಶ್ವಾಸದಿಂದ ಕೂಡಿದ ಕಾಲ. ಸಂತಸದ ವಾತಾವರಣ.

ವೃಶ್ಚಿಕ:

ಕೆಲವು ಸಮಯದಿಂದ ಸಹಿಸಿಕೊಂಡು ಬಂದ ಕ್ಲೇಷಗಳಿಗೆ ಮುಕ್ತಿ. ಪೂರ್ವ ನಿರ್ಧಾರಿತ ಯೋಜನೆಗಳು ಸಫ‌ಲ. ನಾಯಕತ್ವದಿಂದ ನಿರೀಕ್ಷಿತ ಸಾಧನೆ. ವಾಕ್‌ಚತುರತೆಯಿಂದ ಜನಮನ್ನಣೆ. ಆರೋಗ್ಯ ವೃದ್ಧಿ.

ಧನು:

ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಸಿಗದು. ಸ್ವಂತ ಪ್ರಯತ್ನದಲ್ಲಿ ವಿಶ್ವಾಸ. ಕಾರ್ಯಸಾಧಿಸಿಕೊಳ್ಳಿ. ಮೇಲಾಧಿಕಾರಿಗಳಲ್ಲಿ ಸಂಯಮದಿಂದ ವ್ಯವಹರಿಸಿ. ಪಾಲುದಾರಿಕಾ ಕ್ಷೇತ್ರದವರು ತಾಳ್ಮೆ ಕಳೆದುಕೊಳ್ಳಬಾರದು.

ಮಕರ:

ದೈಹಿಕ ಆರೋಗ್ಯ ಉತ್ತಮ, ಖರ್ಚಿನಲ್ಲಿ ಹಿಡಿತ ಸಾಧಿಸಿ. ವಿದ್ಯಾರ್ಥಿಗಳು ಅಡಚಣೆಯಿದ್ದರೂ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗುವುದು. ಕ್ರಯವಿಕ್ರಯಕ್ಕೆ ಸಮಯ. ದಾಂಪತ್ಯದಲ್ಲಿ ತೃಪ್ತಿ.

ಕುಂಭ:

ಹೆಚ್ಚಿನ ಸ್ಥಾನ. ಧನಾರ್ಜನೆಗೋಸ್ಕರ ಪ್ರಯಾಣ, ಉದ್ಯೋಗ ಬದಲಾವಣೆಯ ಆಲೋಚನೆ. ಆರೋಗ್ಯದ ಕಡೆ ಗಮನಿಸಿ.ಗುರುಹಿರಿಯರಿಗೆ, ಮೇಲಧಿಕಾರಿಗಳಿಗೆ ತೊಂದರೆ ಕೊಡದೇ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ವ್ಯವಹರಿಸಿ ಅಭಿವೃದ್ಧಿ ಸಾಧಿಸಿರಿ.

ಮೀನ:

ಗೌಪ್ಯತೆಯ ವ್ಯವಹಾರದಿಂದ ಲಾಭ. ಜಲೋತ್ಪನ್ನ ವಸ್ತುಗಳಿಂದ ನಿರೀಕ್ಷಿತ ಫ‌ಲಿತಾಂಶ. ಆರೋಗ್ಯ ಗಮನಿಸಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ಕೊರತೆಯಾಗದು. ಸಣ್ಣ ಪ್ರಮಾಣದ ಉಳಿತಾಯ. ಧನಲಾಭ

Advertisement

Udayavani is now on Telegram. Click here to join our channel and stay updated with the latest news.

Next