Advertisement

ಶನಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:13 AM Jun 18, 2022 | Team Udayavani |

ಮೇಷ:

Advertisement

ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆಗಳು ನಿವಾರಣೆಯಾಗಿ ನೆಮ್ಮದಿ. ನಿರೀಕ್ಷಿತ ಸಫ‌ಲತೆ. ಉತ್ತಮ ಧನ ಸಂಗ್ರಹ. ಬಂಧು ಮಿತ್ರರ ಸಹಾಯ ಸಹಕಾರ ಪ್ರಾಪ್ತಿ. ಮಕ್ಕಳ ನಿಮಿತ್ತ ಪ್ರಯಾಣ ಖರ್ಚು ಸಂಭವ.

ವೃಷಭ:

ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ಧನವ್ಯಯ ಆಸ್ತಿ ವಿಚಾರರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರದ ವ್ಯವಹಾರಗಳಲ್ಲಿ ಪ್ರಗತಿ.

ಮಿಥುನ:

Advertisement

ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು. ದೂರದ ವ್ಯವಹಾರದಿಂದ ಉತ್ತಮ ಧನ ಸಂಪತ್ತು ವೃದ್ಧಿ.

ಕರ್ಕ:

ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ನಿರ್ಣಯ ಸಾಧ್ಯ. ದಾಂಪತ್ಯದಲ್ಲಿ ಪರಸ್ಪರರಿಂದ ಸಹಕಾರ. ಗುರುಹಿರಿಯರಿಂದ ರಕ್ಷೆ.

ಸಿಂಹ:

ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನ ಪದರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ನೀಡದಿರಿ. ಧನಾರ್ಜನೆಗೆ ಕೊರತೆ ಕಾಣದು.

ಕನ್ಯಾ:

ದೀರ್ಘ‌ ಪ್ರಯಾಣ ಸಂಭವ. ದೇಹಾ ಯಾಸ ತೋರಿತು. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ. ಮಕ್ಕಳಿಂದಲೂ ಗುರುಹಿರಿಯರಿಂದಲೂ ಸುಖ ಸಂತೋಷ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ.

ತುಲಾ:

ಆರೋಗ್ಯ ಉತ್ತಮ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ ಮೇಲಧಿಕಾರಿಗಳ ಸಹಕಾರ ಮಾರ್ಗ ದರ್ಶನ ಲಾಭ.ಸಾಂಸಾರಿಕ ಸುಖ ತೃಪ್ತಿದಾಯಕ .

ವೃಶ್ಚಿಕ:

ಅಧಿಕ ಕಾರ್ಯ ಚಟುವಟಿಕೆಗಳಿಂದ ಕೂಡಿದ ದಿನ. ಎಲ್ಲಾ ವಿಧಗಳಲ್ಲೂ ಯಶಸ್ಸು. ಲಭಿಸುವ ಅವಕಾಶ. ಈ ದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಲವಾರು ಶುಭಫ‌ಲಗಳು.

ಧನು:

ಆರೋಗ್ಯದಲ್ಲಿ ಸುಧಾರಣೆ. ಜವಾ ಬ್ದಾರಿಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ. ಸ್ಥಾನ ಸುಖ ವೃದ್ಧಿ. ಅನ್ಯರ ಸಹಕಾರ ನಿರೀಕ್ಷಿಸದೇ ಕಾರ್ಯ ಪ್ರವೃತ್ತರಾಗಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ.

ಮಕರ:

ಆರೋಗ್ಯ ಸ್ಥಿರ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಲಾಭ. ಸ್ಥಾನಾದಿ ಸುಖ. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ.

ಕುಂಭ:

ಉತ್ತಮ ವಾಕ್‌ಚತುರತೆ. ಗಾಂಬೀರ್ಯ ಪ್ರದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಜಯ. ಆಸ್ತಿ ವಾಹನಾದಿ ಲಾಭ. ಅಧಿಕ ಗೌರವದಿಂದ ಕೂಡಿದ ಧನಾರ್ಜನೆ..

ಮೀನ:

ಉತ್ತಮ ಆರೋಗ್ಯ ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ ಆಲೋಚನೆಯಿಂದ ಕೂಡಿ ಕಾರ್ಯವೈಖರಿ. ದೂರ ಪ್ರಯಾಣದಿಂದಲೂ, ಧನಾರ್ಜನೆ ಸಂಭವ. ತಾಳ್ಮೆಯ ನಿರ್ಣಯ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next