Advertisement

Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

12:03 AM Jan 11, 2025 | Team Udayavani |

ಮಂಗಳೂರು: ನರಿಂಗಾನ ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿರುವ ಹಿನ್ನೆಲೆಯಲ್ಲಿ ಕಂಬಳಾಭಿಮಾನಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಂಬಳ ಸಮಿತಿಯಿಂದ ಸಿಎಂ ಅವರಿಗೆ ಶನಿವಾರ ಅಹವಾಲು ಸಲ್ಲಿಸಲು ತೀರ್ಮಾನಿಸಲಾಗಿದೆ.

Advertisement

ಕಂಬಳಕ್ಕೆ ಸಹಾಯಧನ ಪ್ರಾಯೋಜಕತ್ವ ಶೀಘ್ರ ಬಿಡುಗಡೆ ಮಾಡಬೇಕು ಎಂದು ಕಂಬಳ ಸಮಿತಿ ಸಿಎಂ ಅವರಿಗೆ ಮನವಿ ಸಲ್ಲಿಸಲಿದೆ. “ಉದಯವಾಣಿ’ ಜತೆಗೆ ಮಾತನಾಡಿದ ಸಮಿತಿ ಅಧ್ಯಕ್ಷ ದೇವೀಪ್ರಸಾದ್‌ ಶೆಟ್ಟಿ, ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ಭವನ ನಿರ್ಮಾಣಕ್ಕೆ 2 ಎಕ್ರೆ ಜಾಗ ಗುರುತಿಸಿ ಕಂಬಳ ಮ್ಯೂಸಿಯಂ ಮಾಡಬೇಕು.

ಕಂಬಳ ರಾಜ್ಯ ಅಸೋಸಿಯೇಶನ್‌ಗೆ ಮನವಿ ಸಲ್ಲಿಸಿದ್ದು, ಕ್ರೀಡಾ ಇಲಾಖೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಬೇಕು ಎಂಬ ಮನವಿಯನ್ನು ಸಿಎಂ ಗಮನ ಸೆಳೆಯಲಾಗುವುದು ಎಂದರು.

ಇಂದು ನರಿಂಗಾನ ಕಂಬಳ: ಸಿಎಂ ಭಾಗಿ
ಮಂಗಳೂರು: ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ನೇತೃತ್ವದ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾ.ಪಂ. ಸಹಕಾರದಲ್ಲಿ ನರಿಂಗಾನದ ಮೋರ್ಲ- ಬೋಳದಲ್ಲಿ “ಲವ-ಕುಶ’ ಜೋಡುಕರೆ ನರಿಂಗಾನ ಕಂಬಳ ಜ. 11ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.

ಸಿಎಂ ಅವರು ಆ ದಿನ ಸಂಜೆ 5ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಸಂಜೆ 6ಕ್ಕೆ ಮಂಜನಾಡಿ ತಲುಪಿ 6.15ಕ್ಕೆ ನರಿಂಗಾನ ಕಂಬಳ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next