Advertisement

R. Ashok: ಸೋನಿಯಾ ಯಾರೆಂದು ಪಿತ್ರೊಡಾ ಹೇಳಲಿ?; ಅಶೋಕ್‌

08:13 PM May 09, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ರಕ್ತದಲ್ಲಿಯೇ ಜನಾಂಗ ನಿಂದನೆಯ ಮನಃಸ್ಥಿತಿ ಇದ್ದು, ದಕ್ಷಿಣ ಭಾರತೀಯರ ಬಣ್ಣದ ಬಗ್ಗೆ ಮಾತನಾಡಿರುವ ಸ್ಯಾಮ್‌ ಪಿತ್ರೊಡಾ ಅವರು ಸೋನಿಯಾ ಗಾಂಧಿ ಯಾರು? ಎಲ್ಲಿಯವರು ಎಂದು ಹೇಳಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದವರು ಆಫ್ರಿಕಾದವರು ಎನ್ನುವುದಾದರೆ ಸಿಎಂ ಸಿದ್ದರಾಮಯ್ಯ ಮೊದಲು ಆಫ್ರಿಕಾಕ್ಕೆ ಹೋಗಿ ಅಲ್ಲಿ ಸಿಎಂ ಆಗಬೇಕು. ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ಅರಿಯದ ಪಿತ್ರೊಡಾ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ. ದೇಶ ಒಡೆಯುವ ಹೇಳಿಕೆ ಕೊಟ್ಟ ಡಿ.ಕೆ.ಸುರೇಶ್‌ ಹಿನ್ನೆಲೆ ಗಾಯಕ, ವರ್ಣಭೇದದ ಹೇಳಿಕೆ ಕೊಟ್ಟ ಪಿತ್ರೊಡಾ ಮುನ್ನೆಲೆ ಗಾಯಕ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣದ ಗ್ಯಾರಂಟಿಯನ್ನು ನೀಡಿದ್ದಾರೆ. ಹಿಂದೆ ವರ್ಣಭೇದ ನೀತಿಯಿಂದ ಅನೇಕ ಸಾವು ನೋವುಗಳಾಗಿತ್ತು. ವರ್ಣಭೇದದ ವಿರುದ್ಧ ನೆಲ್ಸನ್‌ ಮಂಡೇಲಾ, ಮಹಾತ್ಮ ಗಾಂಧೀಜಿ  ಹೋರಾಟ ನಡೆಸಿದ್ದರು. ಆದರೆ ಕಾಂಗ್ರೆಸ್‌ ಬಣ್ಣದ ಆಧಾರದಲ್ಲಿ ಜನರ ಮನಸ್ಸನ್ನು ಒಡೆದಿದೆ. 5 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮನ್ನು ಆಫ್ರಿಕದವರು ಎಂದಿದ್ದಾರೆ. ಒಕ್ಕಲಿಗರು, ಲಿಂಗಾಯತರು, ದಲಿತರಿಗೆ ಕಾಂಗ್ರೆಸ್‌ ಯಾವ ಬಣ್ಣ ಹಚ್ಚುತ್ತದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next