Advertisement
ನಗರದ ಎಸ್ಜೆಎಂ ಐಟಿ ಕಾಲೇಜು ಆವರಣದಲ್ಲಿ ಜಾಥಾದ ಮಹತ್ವದ ಬಗ್ಗೆ ಮಾತನಾಡಿದ ಅವರು, ನಾಗರಿಕರು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳೊಂದಿಗೆ ಕೈಜೋಡಿಸಬೇಕು. ಅದರಲ್ಲೂ ಯುವಕ-ಯುವತಿಯರು, ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದರು.
ಭದ್ರತಾ ಪಡೆ 33 ವರ್ಷಗಳನ್ನು ಪೂರೈಸಿದೆ. ದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗಳನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2008ರಲ್ಲಿ ನಡೆದ ಮುಂಬೈ ದಾಳಿ ಮತ್ತು ಕಳೆದ ವರ್ಷ ಪಠಾಣ್ ಕೋಟ್ನಲ್ಲಿ ನಡೆದ ಉಗ್ರರ ದಾಳಿ ನಿಗ್ರಹಿಸುವಲ್ಲಿ ಎನ್ಎಸ್ಜಿ ಕಮಾಂಡೋಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದರು. ನಾಗರಿಕರು ಈ ದೇಶದ ಕಣ್ಣು ಮತ್ತು ಕಿವಿ ಇದ್ದಂತೆ. ಆದ್ದರಿಂದ ನಾಗರಿಕರಿಂದಲೇ ಭಯೋತ್ಪಾದನೆ ವಿರುದ್ಧ ಹೋರಾಟ ಆರಂಭವಾಗಬೇಕು. ನಮ್ಮ ಸುತ್ತಮುತ್ತ ನಡೆಯುವ ಸಮಾಜಘಾತುಕ ಕೃತ್ಯಗಳ ಮೇಲೆ ಕಣ್ಣಿಟ್ಟಿರಬೇಕು. ಅದನ್ನು ಸ್ಥಳೀಯ ಪೊಲೀಸರಿಗೆ ತಿಳಿಸುವ ಮೂಲಕ ಘಟನೆ ನಡೆಯದಂತೆ ತಡೆಯಬೇಕಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಬೈಕ್ ಜಾಥಾದಮುಖ್ಯ ಉದ್ದೇಶ ಎಂದರು.
Related Articles
Advertisement
ಮಹಿಳಾ ಕಮಾಂಡೂಗಳೂ ರಾಷ್ಟ್ರೀಯ ಭದ್ರತಾ ಪಡೆಯಲ್ಲಿದ್ದಾರೆ. ನಾಗರಿಕರು ಎಚ್ಚರ ವಹಿಸಿದರೆ ಭ್ರಷ್ಟಾಚಾರದ ಜೊತೆಗೆ ಎಲ್ಲ ತರಹದ ಭಯೋತ್ಪಾದನೆಯನ್ನೂ ನಿಗ್ರಹಿಸಬಹುದು. ಅದು ಶಾಲಾ-ಕಾಲೇಜುಗಳಿಂದಲೇ ಪ್ರಾರಂಭವಾಗಬೇಕು ಎಂದು ಅಮಿತ್ ಕುಮಾರ್ ಹೇಳಿದರು.
ನಗರ ಪೊಲೀಸ್ ಠಾಣೆ ನಿರೀಕ್ಷಕ ಎಸ್ .ಟಿ. ಒಡೆಯರ್, ಕೋಟೆ ಠಾಣೆ ವಿಭಾಗದ ವೃತ್ತ ನಿರೀಕ್ಷಕ ಮಹಮ್ಮದ್ ಫೈಜುಲ್ಲಾ ಹಾಗೂ ಸಿಬ್ಬಂದಿ, ಎಸ್ಜೆಎಂ ಐಟಿ ಕಾಲೇಜು ಪ್ರಾಧ್ಯಾಪಕರು ಇದ್ದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು. ಡಿವೈಎಸ್ಪಿ ಲಕ್ಷ್ಮಣ ನಿಂಬರಗಿ ಸಾಥ್ ನೀಡಿದರು.
7 ಸಾವಿರ ಕಿಮೀ ಕ್ರಮಿಸುವ ಗುರಿಬೈಕ್ ಜಾಥಾ 40 ದಿನಗಳಲ್ಲಿ 13 ರಾಜ್ಯಗಳ ಒಟ್ಟು 7 ಸಾವಿರ ಕಿಮೀ ದೂರವನ್ನು ಕ್ರಮಿಸಲಿದೆ. ದೆಹಲಿಯಿಂದ ಆರಂಭಗೊಂಡಿರುವ ಜಾಥಾ, ಜೈಪುರ, ಅಜ್ಮೀರ್ , ಉದಯಪುರ, ಅಹ್ಮದಾಬಾದ್, ಸೂರತ್, ಮುಂಬೈ, ಸತಾರಾ, ಬೆಳಗಾವಿ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿದೆ. ಇಲ್ಲಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್, ಭುವನೇಶ್ವರ್, ಕೋಲ್ಕತ್ತಾಕ್ಕೆ ಹೋಗಿ ನಂತರ ದೆಹಲಿ ತಲುಪಲಿದೆ. ತಂಡದಲ್ಲಿ ಒಟ್ಟು 32 ಕಮಾಂಡೋಗಳಿದ್ದು, 20 ಬೈಕ್ ಸವಾರರು, 12 ಸಹಾಯಕರು ಇದ್ದಾರೆ ಎಂದು ಅಮಿತ್ಕುಮಾರ್ ಮಾಹಿತಿ ನೀಡಿದರು. ಜಾಥಾದ ಮೂಲಕ ಆಯಾ ಭಾಗದ ಶಾಲಾ-ಕಾಲೇಜುಗಳು, ವಕೀಲರ ಸಂಘ, ಯುವಕ ಸಂಘಗಳನ್ನು ಭೇಟಿಯಾಗಿದ್ದೇವೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ಮಾಡಿ ಬೀಳ್ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.