Advertisement

ಸರ್ಕಾರಿ ಬಸ್‌ನಲ್ಲೇ ಅಪ್ರಾಪ್ತ ವಯಸ್ಕಳ ಮೇಲೆ ಸಿಬಂದಿಗಳ ರೇಪ್‌ ಯತ್ನ

09:18 AM Jul 11, 2017 | Team Udayavani |

ಉಡುಪಿ: ಅಪ್ರಾಪ್ತ  ವಯಸ್ಕಳ ಮೇಲೆ  ಮೂವರು ಕೆಎಸ್‌ಆರ್‌ಟಿಸಿ ಸಿಬಂದಿಗಳು ಚಲಿಸುತ್ತಿರುವ ಬಸ್‌ನಲ್ಲೇ ಲೈಂಗಿಕ  ಕಿರುಕುಳ ನೀಡಿದ ಘಟನೆ ರಾಣೆಬೆನ್ನೂರಿನಲ್ಲಿ ಜುಲೈ 5ರಂದು ನಡೆದಿದೆ.

Advertisement

ಮಣಿಪಾಲದಲ್ಲಿ  ಕೆಲಸ ಮಾಡಿಕೊಂಡಿದ್ದ ತರುಣಿ  ಹಾವೇರಿಗೆ ಹೋಗಿದ್ದು, ಅಲ್ಲಿಂದ ವಾಪಸ್‌ ಬರುತ್ತಿದ್ದ ಸಂದರ್ಭದಲ್ಲಿ ಬಸ್‌ ಸಿಬಂದಿಯೇ ಈ ನೀಚ ಕೃತ್ಯ ಎಸಗಿದ್ದಾರೆ.

ಮಾನಸಿಕವಾಗಿ ಮನನೊಂದ ಯುವತಿ ಘಟನೆ ನಡೆದು 5 ದಿನಗಳ ಬಳಿಕ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ದೂರು  ನೀಡಿದ್ದಾಳೆ. 

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ  ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next