Advertisement

ಪಡೆದುಕೊಂಡ ಸಾಲ ಹಿಂದಿರುಗಿಸದ್ದಕ್ಕೆ ಹಲ್ಲೆ

10:48 PM Mar 17, 2023 | Team Udayavani |

ಸಿದ್ದಾಪುರ: ಪಡೆದುಕೊಂಡಿದ್ದ ಸಾಲದ 10 ಸಾವಿರ ರೂ. ಮೊತ್ತದಲ್ಲಿ ಬಾಕಿ ಇರುವ 2 ಸಾವಿರ ರೂ. ಹಣಕ್ಕಾಗಿ ಉಳ್ಳೂರು-74 ಗ್ರಾಮದ ಸುರೇಶ ಶೆಟ್ಟಿ ಅವರು ಮನೆಯ ಒಳಗೆ ಆಕ್ರಮ ಪ್ರವೇಶ ಮಾಡಿ, ಗ್ಯಾಸ್‌ ಸಿಲಿಂಡರ್‌ ತೆಗೆದುಕೊಂಡು ಹೋಗಲು ಯತ್ನಿಸಿದರು. ಆ ಸಂದರ್ಭ ಹಣ ಹಿಂದಿರುಗಿಸುದ್ದಾಗಿ ಹೇಳಿದರೂ ಕೇಳದೆ ಕೈಯಿಂದ ಹಲ್ಲೆ ನಡೆಸಿದರು ಎಂದು ಕುಷ್ಠ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕುಷ್ಠ ನಾಯ್ಕ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next