Advertisement

ಹಲ್ಲೆ: ದೂರು, ಪ್ರತಿದೂರು ದಾಖಲು

08:14 PM Mar 30, 2023 | Team Udayavani |

ಸಿದ್ದಾಪುರ: ಆಜ್ರಿ ಗ್ರಾಮದ ಚೌಕುಳಮಕ್ಕಿ ಎಂಬಲ್ಲಿ ಮನೆ ಕಟ್ಟುತ್ತಿದ್ದಾಗ ರಾಮ ಪೂಜಾರಿ, ರಮೇಶ ಪೂಜಾರಿ ಮತ್ತು ಕೃಷ್ಣ ಪೂಜಾರಿ ಅವರು ಜಾಗದ ತಕರಾರು ತೆಗೆದು ಮರದ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಸವಿತಾ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಪ್ರತಿದೂರು
ಗೇರು ತೋಟದಲ್ಲಿ ಗೇರು ಬೀಜ ಹೆಕ್ಕುತ್ತಿದ್ದಾಗ ಆರೋಪಿಗಳಾದ ಲಕ್ಷ್ಮೀ ಪೂಜಾರಿ, ಶಂಕರ ಪೂಜಾರಿ, ಅಣ್ಣಪ್ಪ ಪೂಜಾರಿ, ಗೋಪಾಲ ಪೂಜಾರಿ, ಉಮಾಪತಿ, ಉದಯ ಪೂಜಾರಿ ಅವರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಜಾಗದ ತಕರಾರು ತೆಗೆದು, ಸವಿತಾ ಅವರಿಗೆ ಮನೆ ಕಟ್ಟಲು ಜಾಗ ಯಾಕೆ ಕೊಡುವುದಿಲ್ಲ ಎಂದು ಹಲ್ಲೆ ನಡೆಸಿದರು ಎಂದು ಬೇಬಿ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next