Advertisement

ನೈಸಾಗಿ ಕೈ ಹಿಡಿಯಲಿದ್ದಾರೆಯೇ ಮಕ್ಕಳ ಪಕ್ಷದ ಅಶೋಕ್‌ ಖೇಣಿ? 

11:21 AM Jan 30, 2018 | Team Udayavani |

ಬೀದರ್‌: ಉದ್ಯಮಿ,ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್‌ ಖೇಣಿ ಅವರು ಶೀಘ್ರದಲ್ಲೇ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಖೇಣಿ  ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಬಹುತೇಕವಾಗಿ ಖಚಿತವಾಗಿದೆ ಎನ್ನಲಾಗಿದೆ. 

Advertisement

ಕರ್ನಾಟಕ ಮಕ್ಕಳ ಪಕ್ಷವನ್ನು ಹುಟ್ಟು ಹಾಕಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಖೇಣಿ ಕಳೆದ ಚುನಾವಣೆಯಲ್ಲಿ 47763 ಮತಗಳನ್ನು ಪಡೆದು ಸಮೀಪದ ಜೆಡಿಎಸ್‌ ಅಭ್ಯರ್ಥಿ  ಬಂಡೆಪ್ಪ ಕಾಶಂಪೂರ್‌ ಅವರನ್ನು 14788 ಮತಗಳ ಅಂತರದಿಂದ ಮಣಿಸಿದ್ದರು. ಬಳಿಕ ಸಿದ್ದರಾಮಯ್ಯ ಅವರಿಗೆ ಬಹಿರಂಗ ಬೆಂಬಲವನ್ನೂ ಸೂಚಿಸಿದ್ದರು. 

ಬೀದರ್‌ ದಕ್ಷಿಣ ಕ್ಷೇತ್ರದ ಟಿಕೇಟ್‌ ಆಕಾಂಕ್ಷಿಯಾಗಿ ಕೆಲಸ ಮಾಡುತ್ತಿದ್ದ ಮಾಜಿ ಸಿಎಂ ದಿವಂಗತ ಧರಂ ಸಿಂಗ್‌ ಅವರ ಅಳಿಯ ಚಂದ್ರ ಸಿಂಗ್‌ ಅವರಿಗೆ ಇದೀಗ ಟಿಕೇಟ್‌ ಕೈತಪ್ಪುವ ಭೀತಿ ಎದುರಾಗಿದೆ. 

67 ರ ಹರೆಯದ ಖೇಣಿ ನೈಸ್‌ (ನಂದಿ ಇನ್ಫ್ರಾಸ್ಟ್ರಕ್ಚರ್‌ ಕೊರಿಡಾರ್‌ ಎಂಟರ್‌ಪ್ರೈಸಸ್‌ )ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next