Advertisement

ಯುವಕನ ಕ್ಷೌರ ಮಾಡಿದ ಖೇಣಿ

07:35 AM May 04, 2018 | Team Udayavani |

ಬೀದರ: ನೈಸ್‌ ಸಂಸ್ಥೆ ಮುಖ್ಯಸ್ಥ, ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಖೇಣಿ ಅವರು ಸಲೂನ್‌ ಅಂಗಡಿಯಲ್ಲಿ ಯುವಕನ ಕ್ಷೌರ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. 

Advertisement

ತಾಲೂಕಿನ ಆಣದೂರ ಗ್ರಾಮದಲ್ಲಿ ಗುರುವಾರ ಖೇಣಿ ಅವರು ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಈ ವೇಳೆ, ದಾರಿಯಲ್ಲಿದ್ದ ಸಲೂನ್‌ ಅಂಗಡಿಗೆ ತೆರಳಿದ ಖೇಣಿ, ಕ್ಷೌರಿಕನ ಕೈಯಲ್ಲಿದ್ದ ಕತ್ತರಿ ಮತ್ತು ಬಾಚಣಿಕೆ ಪಡೆದು ಯುವಕನ ಕ್ಷೌರ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next