Advertisement

Watch: ಹಳೆಯ ಬಜೆಟ್ ಪ್ರತಿ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

02:27 PM Feb 10, 2023 | Team Udayavani |

ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ(ಫೆ.10) ವಿಧಾನಸಭೆಯಲ್ಲಿ ನಗೆಪಾಟಲಿಗೆ ಈಡಾದ ಪ್ರಸಂಗ ನಡೆಯಿತು. ಅದಕ್ಕೆ ಕಾರಣ ಗೆಹ್ಲೋಟ್, ಈ ಸಾಲಿನ ಬಜೆಟ್ ಓದುವ ಬದಲು ಹಿಂದಿನ ವರ್ಷದ ಬಜೆಟ್ ಓದಿರುವುದು!

Advertisement

ಇದನ್ನೂ ಓದಿ:ವರಾಹ ರೂಪಂ ವಿವಾದ; ರಿಷಬ್ ಶೆಟ್ಟಿಯನ್ನು ಬಂಧಿಸಬೇಡಿ-ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

ವಿಧಾನಸಭೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್, ಬಜೆಟ್ ಮಂಡಿಸಲು ಆರಂಭಿಸಿದ್ದರು. ಸುಮಾರು ಎಂಟು ನಿಮಿಷಗಳ ಬಳಿಕ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಅವರು ಗೆಹ್ಲೋಟ್ ಬಳಿ ಬಂದು, ಸರ್..ನೀವು ಹಿಂದಿನ ವರ್ಷದ ಬಜೆಟ್ ಓದುತ್ತಿದ್ದೀರಿ, ಭಾಷಣ ನಿಲ್ಲಿಸಿ ಎಂದು ಗಮನಕ್ಕೆ ತಂದಿದ್ದರು!

ಬಜೆಟ್ ಮಂಡಿಸಿದ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದ ಹಳೆಯ ಯೋಜನೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ಆಗ ವಿಪಕ್ಷಗಳು ಗದ್ದಲ ಎಬ್ಬಿಸಿದ್ದು, ಬಳಿಕ ಕಾಂಗ್ರೆಸ್ ಮುಖಂಡ ಜೋಶಿ ಅವರು ಗೆಹ್ಲೋಟ್ ಅವರ ಗಮನಕ್ಕೆ ವಿಚಾರದ ತಂದ ನಂತರ ಮುಖ್ಯಮಂತ್ರಿ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದ ಘಟನೆ ನಡೆಯಿತು.

Advertisement

ಆದರೆ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಿದ್ದು, ವಿಧಾನಸಭೆ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಸಿಎಂ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂದರಾಜೆ ಕೂಡಾ ಕಿಡಿಕಾರಿದ್ದು, ಗೆಹ್ಲೋಟ್ 8 ನಿಮಿಷಗಳ ಕಾಲ ಹಳೆಯ ಬಜೆಟ್ ಅನ್ನೇ ಓದಿದ್ದಾರೆ. ಹಾಗಾದರೆ ಇಂತಹ ಮುಖ್ಯಮಂತ್ರಿ ಕೈಯಲ್ಲಿ ರಾಜ್ಯ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next