Advertisement

ಕನ್ವರ್ ಯಾತ್ರಿಕರ ಮೇಲೆ ಪುಷ್ಪವೃಷ್ಟಿ : ಓವೈಸಿ ಆಕ್ರೋಶ

01:50 PM Jul 27, 2022 | Team Udayavani |

ನವದೆಹಲಿ : ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಸಾರ್ವಜನಿಕ ಹಣವನ್ನು ಬಳಸಿಕೊಂಡು ಕನ್ವರ್ ಯಾತ್ರಿಕರ ಮೇಲೆ ಪುಷ್ಪವೃಷ್ಟಿ ಮಾಡುತ್ತಿದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂದು ನಾವು ಬಯಸುತ್ತೇವೆ. ಅವರು ಮುಸ್ಲಿಮರ ಮೇಲೆ ಹೂವುಗಳನ್ನು ಸುರಿಸುವುದಿಲ್ಲ, ಬದಲಿಗೆ ನಮ್ಮ ಮನೆಗಳನ್ನು ಬುಲ್ಡೋಜ್ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಸಿಎಂ ಯೋಗಿ ವಿರುದ್ಧ ಟ್ವೀಟ್ ಮಾಡಿದ್ದು, ಪೊಲೀಸರು ಕನ್ವರಿಯರ ಮೇಲೆ ಪುಷ್ಪವೃಷ್ಟಿ ಮಾಡುತ್ತಿದ್ದಾರೆ, ಕನ್ವರಿ ಯಾತ್ರಿಕರನ್ನು ತ್ರಿವರ್ಣ ಧ್ವಜದಿಂದ ಪೂಜಿಸುತ್ತಿದ್ದಾರೆ. ಅದೇ ಸಮಯದಲ್ಲಿ ಯುಪಿಯಲ್ಲಿ ಮಾಂಸವನ್ನು ನಿಷೇಧಿಸಲಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next