Advertisement

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

04:41 PM Oct 20, 2021 | Team Udayavani |

ಮುಂಬಯಿ : ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಎನ್ ಡಿಪಿಯಸ್ ನ್ಯಾಯಾಲಯ ಬುಧವಾರ ಜಾಮೀನು ನೀಡಲು ನಿರಾಕರಿಸಿದ ಬಳಿಕ ಕೆಲ ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು, ಅತಿರೇಕ,ಹೃದಯ ವಿದ್ರಾವಕ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಶಾರುಖ್ ಖಾನ್ ನಟಿಸಿದ್ದ ‘ರಯೀಸ್‌’ ಚಿತ್ರ ನಿರ್ದೇಶಿಸಿದ ರಾಹುಲ್ ಧೋಲಾಕಿಯಾ ಟ್ವೀಟ್ ಮಾಡಿದ್ದು, ‘ಅತಿರೇಕ !!! ಅವನ ಫೋನ್‌ನಿಂದ ತೆಗೆಯಲಾದ “ವಾಟ್ಸಾಪ್” ಚಾಟ್‌ನ ಆಧಾರದ ಮೇಲೆ ಅವನ “ಅಂತರಾಷ್ಟ್ರೀಯ” ರಾಕೆಟ್‌ಗೆ “ಸಂಭಾವ್ಯ” ಸಂಪರ್ಕವಿದೆ ಎಂದು ನೀವು ಹೇಳುತ್ತಿದ್ದೀರಿ, ಆತನನ್ನು “ಏನೂ ಇಲ್ಲದ” “ಕ್ರೂಸ್” ನಲ್ಲಿ ನೀವು ಜಪ್ತಿ ಮಾಡಿದ್ದೀರಿ? ಮತ್ತು ನೀವು ದಿನಗಳಿಂದ ಹುಡುಕಾಡುತ್ತಿದ್ದೀರಿ, ಇನ್ನೂ ಏನೂ ಸಿಗಲಿಲ್ಲವೇ? # ಫ್ರೀ ಆರ್ಯನ್ ಖಾನ್’ ಎಂದು ಬರೆದಿದ್ದಾರೆ.

‘ಅಪಹಾಸ್ಯ ಮುಂದುವರೆದಿದೆದೆ. ಅಗ್ನಿಪರೀಕ್ಷೆ ಜಾರಿಯಲ್ಲಿದೆ. ಹೃದಯ ವಿದ್ರಾವಕ’ ಎಂದು ಹರ್ಷಲ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.

ಜಾಮೀನು ಅರ್ಜಿಯ ತೀರ್ಪಿನ ಬಳಿಕ ಸಾಮಾಜಿಕ ತಾಣಗಳಲ್ಲಿ ಶಾರುಖ್ ಖಾನ್ ಅಭಿಮಾನಿಗಳ ಆಕ್ರೋಶ ಸ್ಫೋಟಗೊಂಡಿದೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರ್ಯನ್‌ ಖಾನ್‌ ಮತ್ತು ಗೆಳೆಯರನ್ನು ಅಕ್ಟೋಬರ್ 3 ರಂದು ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.ಅಕ್ಟೋಬರ್ 8 ರಿಂದ ಆರ್ಯನ್ ನನ್ನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಆರ್ಯನ್ ಖಾನ್ ಜೈಲುವಾಸ ಮುಂದುವರೆದಿದೆ.

Advertisement

ಮಾದಕದ್ರವ್ಯ ಔಷಧಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ (ಎನ್ ಡಿಪಿಎಸ್ ) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿಸಲಾದ ,ವಿಶೇಷ ನ್ಯಾಯಾಧೀಶ ವಿ.ವಿ. ಪಾಟೀಲ್ ಅವರು ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಫ್ಯಾಶನ್ ಮಾಡೆಲ್ ಮುನ್ಮೂನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next