Advertisement

ನನ್ನ ಭಾವ ಇನ್ನಿಲ್ಲ,ಮಿಶ್ರಾ ಓರ್ವ ಮೂರ್ಖ:ಕೇಜ್ರಿ ಪತ್ನಿ ಆಕ್ರೋಶ 

09:59 AM May 09, 2017 | Team Udayavani |

ಹೊಸದಿಲ್ಲಿ :ಜಮೀನು ಖರೀದಿ ಡೀಲ್‌ಗೆ 50 ಕೋಟಿ ರೂ.ನಿಗದಿಗೊಳಿಸ ಲಾಗಿತ್ತು ಎಂದು ಮಾಜಿ ಸಚಿವ ಕಪಿಲ್‌ ಮಿಶ್ರಾ ಆರೋಪಿಸಿದ್ದ  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಭಾವ ಸುರೀಂದರ್‌ ಕುಮಾರ್‌ ಬನ್ಸಾಲ್‌ ನಿಧನ ಹೊಂದಿರುವುದಾಗಿ ಕೇಜ್ರಿವಾಲ್‌ ಅವರ ಪತ್ನಿ  ಸುನೀತಾ ಮಂಗಳವಾರ ಟ್ವೀಟ್‌ ಮಾಡಿದ್ದಾರೆ. 

Advertisement

ಟ್ವೀಟ್‌ನಲ್ಲಿ ಆಪ್‌ನಿಂದ ಉಚ್ಚಾಟನೆಗೊಂಡಿರುವ ಕಪಿಲ್‌ ಮಿಶ್ರಾ ವಿರುದ್ಧ ಆಕ್ರೋಶ ಹೊರ ಹಾಕಿರುವ ಸುನಿತಾ ‘ನನ್ನ ಭಾವ ನಿಧನ ಹೊಂದಿದ್ದಾರೆ. ಮೂರ್ಖನಾಗಿರುವ ಮಿಶ್ರಾ ಯಾವುದೇ ಆಧಾರವಿಲ್ಲದೆ ಬರೆದುಕೊಟ್ಟ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಸುರೀಂದರ್‌ ಕುಮಾರ್‌ ಬನ್ಸಾಲ್‌ ಅವರು ಅಧಿಕ ಮಧುಮೇಹದಿಂದ ಗುರ್‌ಗಾಂವ್‌ನ ಅಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.

ದಿಲ್ಲಿಯ ಆರೋಗ್ಯ ಸತ್ಯೇಂದ್ರ ಜೈನ್‌ ಸಿಎಂ ಕೇಜ್ರಿವಾಲ್‌ರ ಬಂಧು ಬನ್ಸಾಲ್‌ ಖರೀದಿಸಿಲು ಉದ್ದೇಶಿಸಿದ್ದ ಏಳು ಎಕರೆ ಜಮೀನು ವಹಿವಾಟನ್ನು ಇತ್ಯರ್ಥಪಡಿಸಲು 50 ಕೋಟಿ ರೂ. ಮೊತ್ತ ನಿಗದಿ ಮಾಡಿದ್ದರೆಂದು ಮಿಶ್ರಾ ಆರೋಪಿಸಿದ್ದರು.  ಇದರ ಜತೆಗೆ ಪಂಜಾಬ್‌ ಚುನಾವಣೆ ವೇಳೆ ಕೇಜ್ರಿವಾಲ್‌ ಸಂಬಂಧಿ ಪರವಾಗಿ ಬೋಗಸ್‌ ಬಿಲ್‌ಗ‌ಳನ್ನು ಸೃಷ್ಟಿಸಿ 10 ಕೋಟಿ ರೂ. ಸಂಗ್ರಹಿಸಲಾಗಿತ್ತೆಂದು ದೂರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next