Advertisement

ಕೇಜ್ರಿವಾಲ್‌ ಮೇಲೆ ಖಾರದ ಪುಡಿ ದಾಳಿ

04:05 AM Nov 21, 2018 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲೆ ಖಾರದ ಪುಡಿ ದಾಳಿ ನಡೆದಿದ್ದು, ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಸಿಎಂ ಕಚೇರಿಯ ದ್ವಾರದಲ್ಲೇ ಈ ಘಟನೆ ನಡೆದಿದೆ. ಖಾರದಪುಡಿ ಎರಚುವ ಪ್ರಯತ್ನ ನಡೆಸಿದ ಅನಿಲ್‌ ಕುಮಾರ್‌ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸಿಎಂಗೆ ಮನವಿ ಪತ್ರ ನೀಡುವ ನಾಟಕವಾಡಿದ ಅನಿಲ್‌, ಅನಂತರ ಕಾಲಿಗೆ ಬೀಳಲು ಹೋಗಿದ್ದ. ಕೇಜ್ರಿವಾಲ್‌ ಬೇಡ ಎನ್ನುವಂತೆ ಪಕ್ಕಕ್ಕೆ ಸರಿಯುತ್ತಿರುವಾಗಲೇ ತಂಬಾಕಿನ ಪ್ಯಾಕೆಟ್‌ ಒಂದರಲ್ಲಿ ಅಡಗಿಸಿ ತಂದಿದ್ದ ಖಾರದ ಪುಡಿಯನ್ನು ಅವರ ಮುಖಕ್ಕೆ ಎರಚಿದ್ದಾನೆ. ಸಿಎಂ ಕನ್ನಡಕ ಧರಿಸಿದ್ದರಿಂದ ಅವರಿಗೆ ಖಾರ ತಾಗಿಲ್ಲ. ಆದರೆ ಕನ್ನಡಕ ಕೆಳಕ್ಕೆ ಬಿದ್ದು ಒಡೆದಿದೆ. ಪೊಲೀಸರು ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯನ್ನು ಖಂಡಿಸಿರುವ ಆಮ್‌ ಆದ್ಮಿ ಪಾರ್ಟಿ, ಕೃತ್ಯದ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದೆ. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ, ಕೃತ್ಯವನ್ನು ಖಂಡಿಸಿದ್ದು ಉನ್ನತ ತನಿಖೆಗೆ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next