Advertisement

AAP: ಮೊದಿಯ ದೊಡ್ಡ ಹೆದರಿಕೆ ಕೇಜ್ರಿವಾಲ್‌… ಆಪ್‌ನಿಂದ ಕ್ಯಾಂಪೇನ್‌ ಶುರು

10:33 PM Mar 25, 2024 | Team Udayavani |

ನವದೆಹಲಿ: ಕೇಜ್ರಿವಾಲ್‌ ಬಂಧನ ಬೆನ್ನಲ್ಲೇ ಆಮ್‌ ಆದ್ಮಿ ಪಕ್ಷವು, “ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಸೋಷಿಯಲ್‌ ಮೀಡಿಯಾ ಅಭಿಯಾನಕ್ಕೆ ಮುಂದಾಗಿದೆ.

Advertisement

ಆಪ್‌ ನಾಯಕಿಯೂ ಆಗಿರುವ ದಿಲ್ಲಿ ಸಚಿವೆ ಆತಿಶಿ ಅವರು ಈ ಬಗ್ಗೆ ಮಾಹಿತಿ ನೀಡಿ, “ಜೈಲಿನಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ಅವರ ಚಿತ್ರ ಹಾಗೂ ಮೋದಿ ಕಾ ಸಬ್‌ಸೇ ಬಡಾ ಡರ್‌ ಕೇಜ್ರಿವಾಲ್‌ (ಮೋದಿಯ ದೊಡ್ಡ ಹೆದರಿಕೆಯೇ ಕೇಜ್ರಿವಾಲ್‌) ಎಂಬ ಒಕ್ಕಣಿಕೆಯುಳ್ಳ ಡಿಪಿಯನ್ನು ಆಪ್‌ ನಾಯಕರು, ಸ್ವಯಂ ಸೇವಕರು ತಮ್ಮ ಟ್ವೀಟ ರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತು ಇತರ ಸೋಷಿಯಲ್‌ ಮೀಡಿಯಾದಲ್ಲಿ ಪ್ರೊಫೈಲ್‌ ಪಿಕ್ಚರ್‌ಗಳಾಗಿ ಬದಲಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

“ಇಡೀ ದೇಶದಲ್ಲಿ ಮೋದಿಗೆ ಸವಾಲೆಸೆಯಬಲ್ಲ ಏಕೈಕ ನಾಯಕ ಅರವಿಂದ್‌ ಕೇಜ್ರಿವಾಲ್‌. ಹಾಗಾಗಿ, ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನು ಇ.ಡಿ ಬಂಧಿಸಿದೆ’ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next