Advertisement

ದಿಲ್ಲಿಯಲ್ಲಿ ಪ್ರಚಾರ ಬಿರುಸು; ಕೇಜ್ರಿ, ಶಾ ಚುನಾವಣಾ ಪ್ರಚಾರ ಅಭಿಯಾನ

10:01 AM Jan 24, 2020 | Hari Prasad |

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಚಾರದ ಅಬ್ಬರ ಜೋರಾಗಿದೆ. ಗುರುವಾರ ಆಮ್‌ ಆದ್ಮಿ ಪಕ್ಷದ ನಾಯಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಐದು ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮತಿಯಾಲಾದಲ್ಲಿ ಪ್ರಚಾರ ಜಾಥಾ ನಡೆಸಿದ್ದಾರೆ.

Advertisement

‘ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ’ ಎಂದು ಕೇಜ್ರಿವಾಲ್‌ ಹೇಳಿದ್ದರೆ, “ಸುಳ್ಳು ಆಶ್ವಾಸನೆ ನೀಡುವುದರ ಬಗ್ಗೆ ಸ್ಪರ್ಧೆಯೇನಾದರೂ ನಡೆದರೆ, ಅದರಲ್ಲಿ ಕೇಜ್ರಿವಾಲ್‌ಗೆ ಮೊದಲ ಬಹುಮಾನ’ ಎಂದು ಅಮಿತ್‌ ಶಾ ವ್ಯಂಗ್ಯವಾಡಿದ್ದಾರೆ. “ಕೇಜ್ರಿವಾಲ್‌ ಅವರೇ, ನೀವು ಜನರಿಗೆ ನೀಡಿರುವ ಆಶ್ವಾಸನೆ ಮರೆತಿರಬಹುದು. ಆದರೆ, ದಿಲ್ಲಿಯ ಜನರು ಅದನ್ನು ಮರೆತಿಲ್ಲ’ ಎಂದು ಶಾ ವಾಗ್ಧಾಳಿ ನಡೆಸಿದ್ದಾರೆ.

ಭಾರತ ವರ್ಸಸ್‌ ಪಾಕಿಸ್ಥಾನ!: ದಿಲ್ಲಿ ಬಿಜೆಪಿ ಅಭ್ಯರ್ಥಿ ಕಪಿಲ್‌ ಮಿಶ್ರಾ, ಫೆ. 8ರಂದು ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣೆಯನ್ನು “ಭಾರತ ಮತ್ತು ಪಾಕಿಸ್ಥಾನದ ನಡುವಿನ ಸ್ಪರ್ಧೆ’ ಎಂದು ಬಣ್ಣಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next