Advertisement

ಹಿಂದುತ್ವದ ವಿಷಯದಲ್ಲಿ ಕಾಂಗ್ರೆಸ್ ಗೆ ವಿನಾಶಕಾಲೇ ವಿಪರೀತ ಬುದ್ಧಿ: ಅರುಣ್ ಸಿಂಗ್

03:12 PM Nov 08, 2022 | keerthan |

ವಿಜಯಪುರ: ಹಿಂದುತ್ವ ವಿರೋಧಿ ನಡೆಯಿಂದಲೇ ದೇಶದಲ್ಲಿ ಕಾಂಗ್ರೆಸ್ ವಿನಾಶದ ಅಂಚಿಗೆ ತಲುಪಿದೆ. ವಿನಾಶಕಾಲೇ ವಿಪರೀಪ ಬುದ್ಧಿ ಎನ್ನುಂವತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಸತೀಶ ಜಾರಕಿಹೊಳಿ ಅದನ್ನು ಮುಂದುವರೆಸುತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

Advertisement

ಮಂಗಳವಾರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಅವರು ಪದೇ ಪದೇ ಹಿಂದು ಧರ್ಮವನ್ನೇ ಗುರಿಯಾಗಿಸಿಕೊಂಡು ಅವಮಾನಿಸುತ್ತಲೇ ಸಾಗಿದ್ದಾರೆ. ಇದೀಗ ಹಿಂದು ಅಶ್ಲೀಲ ಎಂಬ ವಿವಾದ ಸೃಷ್ಟಿಸಿ ಹಿಂದುತ್ವವನ್ನು ಅಪಮಾನಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಹಿಂದುತ್ವವನ್ನು ಅಪಮಾನಿಸುವುದೇ ಆದ್ಯತೆ ಎನಿಸಿದೆ ಎಂದು ಹರಿಹಾಯ್ದರು.

ಹಿಂದುತ್ವವಕ್ಕಾಗಿ ಗೂಗಲ್‍ನಲ್ಲಿ ಹುಡುಕುವ ಅಗತ್ಯವಿಲ್ಲ, ಬದಲಾಗಿ ಆದ್ಯಾತ್ಮದ ಧ್ಯಾನದಿಂದ ಅಧ್ಯಯನ ಮಾಡಿದರೆ ನಮ್ಮ ಸಂಸ್ಕೃತಿ ಹಾಗೂ ಜೀವನವಾದ ಹಿಂದುತ್ವದ ದರ್ಶನವಾಗುತ್ತದೆ. ಭಾರತೀಯರ ಪಾಲಿಗೆ ಹಿಂದುತ್ವ ಎಂಬುದು ಗರ್ವದ ಪ್ರತೀಕ. ಹಿಂದುತ್ವದ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಬೇರೆ ಬೇರೆ ವ್ಯಾಖ್ಯಾನ ನೀಡುವ ಮೂಲಕ ಅಪಮಾನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಈಗಾಗಲೇ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಸಿದ್ಧತೆ ಭಾಗವಾಗಿ ವಿವಿಧ ರೀತಿಯಲ್ಲಿ ಪಕ್ಷದ ಸಂಘಟನೆ ನಡೆದಿದೆ. ಸಿಂದಗಿ ಉಪ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿರುವ ಇಲ್ಲಿನ ಜನರು, ಭವಿಷ್ಯದಲ್ಲಿ ನಡೆಯುವ ಚುನಾವಣೆಯಲ್ಲೂ ವಿಜಯಪುರ ಜಿಲ್ಲೆಯ ಅತ್ಯಧಿಕ ಸ್ಥಾನ ಗೆಲ್ಲಿಸುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next