Advertisement

ಕೃತಕ ಕಾಲು ಜೋಡಣೆ ಶಿಬಿರ

03:11 PM Nov 04, 2017 | |

ಕರ್ನಾಟಕ ಮಾರವಾರಿ ಸಮಾಜ, ಭಗವಾನ್‌ ಮಹಾವೀರ್‌ ವಿಕಲಾಂಗ್‌ ಸಹಾಯತಾ ಸಮಿತಿ (ಜೈಪುರ್‌ ಫ‌ೂಟ್‌) ವತಿಯಿಂದ “ಕಾಲಿಲ್ಲದವರಿಗೆ ಉಚಿತ ಕಾಲು’ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ವಿಕಲಾಂಗರಿಗೆ ಜೈಪುರ ಕಾಲು, ಕ್ಯಾಲಿಪರ್ (ಪೋಲಿಯೋ ಬಾಧಿತರಿಗೆ) ಮತ್ತು ಕ್ರಚಸ್‌ ಅನ್ನು ನೀಡಲಾಗುತ್ತದೆ.

Advertisement

ಮುಂಚಿತವಾಗಿ ಕಾಲಿನ ಅಳತೆ ತೆಗೆದುಕೊಂಡು, ನಂತರ ಕೃತಕ ಕಾಲುಗಳನ್ನು ಜೋಡಿಸಲಾಗುವುದು. ಜನವರಿ 7, 2018ರಂದು ಜೋಡಣೆ ನಡೆಯಲಿದೆ. ಕೃತಕ ಕಾಲು ಜೋಡಿಸಿದ ನಂತರ ವ್ಯಕ್ತಿ ಸಾಮಾನ್ಯರಂತೆ ನಡೆದಾಡಬಹುದು, ಸೈಕಲ್‌ ತುಳಿಯಬಹುದು, ಮರ ಹತ್ತಬಹುದು, ಜಮೀನು- ಫ್ಯಾಕ್ಟರಿಯಲ್ಲಿ ಕೆಲಸವನ್ನೂ ಮಾಡಬಹುದು. ನೋಂದಣಿಗೆ ಕೊನೆಯ ದಿನಾಂಕ ಡಿಸೆಂಬರ್‌ 16. 

ಎಲ್ಲಿ?: ಮಹಾರಾಜ ಅಗ್ರಸೇನ್‌ ಭವನ್‌, 2ನೇ ಕ್ರಾಸ್‌, ಅಶೋಕ ಪಿಲ್ಲರ್‌ ಬಳಿ, ಜಯನಗರ 1ನೇ ಬ್ಲಾಕ್‌
ಯಾವಾಗ?: ಡಿ. 17, ಭಾನುವಾರ ಬೆ. 9-3
ನೋಂದಣಿಗೆ ಸಂಪರ್ಕಿಸಿ: ಸಂದೀಪ್‌ ಪೊಡ್ಡಾರ್‌-9620000244, ರಿಂಕೇಶ್‌ ಬರೋಲಿಯಾ – 9886521885

Advertisement

Udayavani is now on Telegram. Click here to join our channel and stay updated with the latest news.

Next