Advertisement

ಮಳೆಗಾಲ ಹೊಳೆ ದಾಟಲು ಅಡಿಕೆ ಮರದ ಪಾಲವೇ ಗತಿ

09:47 PM Mar 19, 2021 | Team Udayavani |

ಅರಂತೋಡು: ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಅಡಿಕೆ ಮರದ ಪಾಲದ ಮೂಲಕ ಹೊಳೆ ಯೊಂದನ್ನು ದಾಟಿ ತಮ್ಮ ಮನೆಗಳನ್ನು ಸೇರಬೇಕಾದ ಅರಮನೆಗಾಯ ಮಲೆ ಕುಡಿಯ ಜನರ ಬಾಳಿನ ಗೋಳು ಈಗ ಕೇಳುವವರು ಯಾರೂ ಇಲ್ಲ ಎಂದು ಅವರು ದೂರಿಕೊಂಡಿದ್ದಾರೆ.

Advertisement

ಅರಂತೋಡು ಗ್ರಾ. ಪಂ.ವ್ಯಾಪ್ತಿಯ ಅರಮನೆಗಾಯ ಎಂಬಲ್ಲಿ ಸುಮಾರು 20ಕ್ಕೂ ಅಧಿಕ ಮಲೆಕುಡಿಯ ಕುಟುಂಬಗಳು ವಾಸವಾಗಿವೆ. ಅವರು ಪೇಟೆಗೆ ಬಂದು ಹೋಗಬೇಕಾದರೆ ಇಲ್ಲಿಯ ಬಲಾ°ಡು ಹೊಳೆಯನ್ನು ದಾಟಬೇಕು. ಬೇಸಗೆಯಲ್ಲಿ ಹೊಳೆಯನ್ನು ದಾಟಿ ಬರುತ್ತಾರೆ. ಮಳೆಗಾದಲ್ಲಿ ಅಡಿಕೆ ಮರದಿಂದ ಮಾಡಿದ ತಾತ್ಕಾಲಿಕ ಕಾಲುಸಂಕದಲ್ಲಿ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಡೆದಾಡುವುದು ಅನಿವಾರ್ಯವಾಗಿದೆ. ದೀರ್ಘ‌ ಸಮಯದಿಂದ ಇಲ್ಲಿಯ ಬಲಾ°ಡ್‌ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿ ಕೊಡಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿಗಳಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಆದರೆ ಈ ಮನವಿಗೆ ಈ ತನಕ ಪೂರಕವಾದ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.

ತುಕ್ಕು ಹಿಡಿದ ಕಬ್ಬಿಣದ ರೋಪ್‌

ಸುಮಾರು 25 ವರ್ಷಗಳ ಹಿಂದೆ ಆಗಿನ ಜಿಲ್ಲಾ ಪರಿಷತ್‌ವತಿಯಿಂದ ತಾತ್ಕಲಿಕ ತೂಗು ಸೇತುವೆ ಮಂಜೂರುಗೊಂಡಿತ್ತು.

ಜತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next