Advertisement

ಮಾನಸಿಕ ಒತ್ತಡ ಕಡಿಮೆ ಮಾಡಲು ಕಲೆ, ಸಾಹಿತ್ಯ, ಮನೋರಂಜನೆ ಅಗತ್ಯ: ಗಂಗಾವತಿ ಬಿ.ಪ್ರಾಣೇಶ್

05:38 PM May 08, 2022 | Team Udayavani |

ಗಂಗಾವತಿ: ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕಲೆ ಸಾಹಿತ್ಯ ಮನರಂಜನೆ ಅತ್ಯಗತ್ಯವಾಗಿತ್ತು ಹಾಸ್ಯದ ಮೂಲಕ ಮನುಷ್ಯ ಸದಾ ಹಸನ್ಮುಖಿಯಾಗಿರುವಂತೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿಯ ಬಿ. ಪ್ರಾಣೇಶ ಹೇಳಿದರು.

Advertisement

ಅವರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಪ್ಪಳದ ಕಲಾವಿದರಾದ ಕೆ ಪಾಂಡು ಹಾಗೂ ಶರಣಪ್ಪ ಬೆಡಗಿ ಆಯೋಜಿಸಿದ್ದ ಗಂಗಾವತಿ ಗತವೈಭವ ಹಾಸ್ಯ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು .

ಗಂಗಾವತಿ ಮತ್ತು ಕೊಪ್ಪಳ ಜಿಲ್ಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ನಂತರ ಇಲ್ಲಿಯ ವಾತಾವರಣ ಬದಲಾಗಿದೆ ಸಾಹಿತಿಕವಾಗಿ ಕಲೆ ಸಂಸ್ಕೃತಿಯ ಬಗ್ಗೆ ಜನರಲ್ಲಿ ಒಲವು ಮೂಡಿದೆ .

ಇದೀಗ ಕಲಾವಿದರೂ ರಾಜ್ಯಮಟ್ಟದ ಖಾಸಗಿ ವಾಹಿನಿಗಳಲ್ಲಿ ಮೂಡಿಬಂದ ಕಾಮಿಡಿ ಕಿಲಾಡಿಗಳು ಡ್ರಾಮಾ ಜೂನಿಯರ್ ಕಲಾವಿದರನ್ನು ಬಳಸಿಕೊಂಡು ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಅತ್ಯಂತ ಶ್ಲಾಘನೀಯವಾಗಿದೆ. ಗಂಗಾವತಿಯ ಜಾರು ಕಲಾವಿದರನ್ನು ಬೆಳೆಸುತ್ತಾರೆ .ಆದ್ದರಿಂದ ಇಲ್ಲಿ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತವೆ . ಗಂಗಾವತಿಯ ದಾನಿಗಳಿಗೆ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ಮನವರಿಕೆ ಮಾಡಿದರೆ ಖಂಡಿತವಾಗಿಯೂ ಅವರು ಪ್ರತಿ ಕಾರ್ಯಕ್ರಮ ಆಯೋಜಕರಿಗೆ ಸಹಕಾರ ನೀಡುತ್ತಾರೆ ಎಂದರು .

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗಿದ ನಂತರ ಗಂಗಾವತಿಯ ಚಿತ್ರಣ ಬದಲಾಗಿದೆ. ಇಲ್ಲಿ ನೂರಾರು ಪುಸ್ತಕಗಳು ಬಿಡುಗಡೆಯಾಗಿವೆ ನೂರಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಲೆ ಸಾಹಿತ್ಯ ಮನರಂಜನೆ ರಂಗಭೂಮಿಗೆ ಸದಾ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ ಎಂದರು .

Advertisement

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಎಫ್. ರಾಘವೇಂದ್ರ ,ಸುಗ್ರೀವ ಸ್ವಯಂಸೇವಾ ಸಂಸ್ಥೆಯ ಸಂಗಮೇಶ ಸುಗ್ರೀವಾ,ಡಿ. ವೆಂಕಟೇಶ್,ಕಾರ್ಯಕ್ರಮದ ಆಯೋಜಕರಾದ ಕೆ .ಪಾಂಡು ಮತ್ತು ಶರಣಪ್ಪ ಬೀಳಗಿ ಇದ್ದರು. ಖಾಸಗಿ ವಾಹಿನಿಯ ಡ್ರಾಮಾ ಜೂನಿಯರ್ಸ್ ಮತ್ತು  ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಲಾವಿದರು ತಡರಾತ್ರಿವರೆಗೂ ಕಾರ್ಯಕ್ರಮ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next