Advertisement

ಕಲಬೆರಕೆ ಸೇಂದಿ ವಶಕ್ಕೆ: ಇಬ್ಬರ ಸೆರೆ

11:56 AM Nov 21, 2021 | Team Udayavani |

ಚಿಂಚೋಳಿ: ತಾಲೂಕಿನ ನಾವದಗಿ ಗ್ರಾಮದ ಹತ್ತಿರ ಬೈಕ್‌ ಮೇಲೆ ಸಾಗಿಸುತ್ತಿದ್ದ ಅಂದಾಜು 55 ಸಾವಿರ ರೂ. ಮೌಲ್ಯದ 10 ಲೀಟರ್‌ ಕಲಬೆರಕೆ ಸೇಂದಿ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಅಬಕಾರಿ ಇನ್ಸ್‌ಪೆಕ್ಟರ್‌ ಜಟ್ಟೆಪ್ಪ ಬೇಲೂರೆ, ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.

Advertisement

ಕಲಬುರಗಿ ತಾಲೂಕಿನ ಕೋರವಾರ ತಾಂಡಾದ ಬಾಬು ರಾಜು ಚವ್ಹಾಣ, ಶಂಕರ ಶಿವರಾಮ ಜಾಧವ ಬಂಧಿತ ಆರೋಪಿತರು. ತಾಲೂಕಿನ ಕೊರವಿ ತಾಂಡಾದಿಂದ ಈ ಸೇಂದಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ನಾವದಗಿ ಗ್ರಾಮದ ಶಾಲೆ ಹತ್ತಿರ ದಾಳಿ ನಡೆಸಿ ಆರೋಪಿತರನ್ನು ಬಂಧಿಸಲಾಗಿದೆ.

ದಾಳಿಯಲ್ಲಿ ಅಬಕಾರಿ ಪೇದೆ ಗೌತಮ ಬುದ್ಧ, ಶಿವಶರಣಪ್ಪ, ಚಾಲಕ ಗುರುನಾಥ ಭಾಗವಹಿಸಿದ್ದರು. ಆರೋಪಿಗಳ ವಿರುದ್ಧ ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next