Advertisement

ಆರ್‌ಎಸ್‌ಎಸ್‌ ಸ್ವಯಂಸೇವಕನಿಂದ ಪಾಕ್‌ಗೆ ಮಾಹಿತಿ ಸೋರಿಕೆ: ಕಾಂಗ್ರೆಸ್‌ ಆರೋಪ

09:33 PM May 10, 2023 | Team Udayavani |

ಮುಂಬೈ: ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನಕ್ಕೆ ಭಾರತದ ರಕ್ಷಣಾ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಡಿಆರ್‌ಡಿಒ ವಿಜ್ಞಾನಿ ಪ್ರದೀಪ್‌ ಕುರುಲ್ಕರ್‌ ಆರ್‌ಎಸ್‌ಎಸ್‌ನ ಸಕ್ರಿಯ ಸ್ವಯಂಸೇವಕ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

ಕಳೆದವಾರವಷ್ಟೇ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಪ್ರದೀಪ್‌ನನ್ನು ಬಂಧಿಸಿತ್ತು.ಬಳಿಕ ಮಂಗಳವಾರವಷ್ಟೇ ಮೇ 15ರವರೆಗೆ ಪ್ರದೀಪ್‌ ಅವರ ಎಟಿಎಸ್‌ ವಶವನ್ನು ಪುಣೆ ವಿಶೇಷ ನ್ಯಾಯಾಲಯ ವಿಸ್ತರಿಸಿದೆ.

ಈ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿ ನಡೆಸಿದೆ.ಈ ವೇಳೆ ಸಂಘದ ಪ್ರಮುಖ ಕಾರ್ಯಕ್ರಮಗಳಲ್ಲಿ, ಸ್ವಯಂಸೇವಕರ ಜತೆಗೆ ಪ್ರದೀಪ್‌ ಭಾಗಿಯಾಗಿರುವ ವಿಡಿಯೋಗಳನ್ನು ಕಾಂಗ್ರೆಸ್‌ ವಕ್ತಾರರು ಮಾಧ್ಯಮಗಳಿಗೆ ತೋರಿಸಿದ್ದಾರೆ.

ಅಲ್ಲದೇ, ಪಾಕಿಸ್ತಾನದ ಪರವಾಗಿ ಗೂಢಚರ್ಯೆ ಮಾಡಿರುವ ಪ್ರದೀಪ್‌ ಆರ್‌ಎಸ್‌ಎಸ್‌ನ ಸ್ವಯಂಸೇವಕ. ದು ರಾಷ್ಟ್ರೀಯವಾದಿ ಎಂದು ಬಿಂಬಿಸಿಕೊಳ್ಳುತ್ತಿರುವ ಸಂಘಟನೆಯ ನಿಜವಾದ ಕುತಂತ್ರ.ಸಂಘಕ್ಕೂ, ಪ್ರದೀಪ್‌ ಗೂ ಇರುವ ಸಂಬಂಧ ಏನು ಅಂಥ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರೇ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next