Advertisement

ಸಿಎಂ ಮನೆ ಬಳಿಯೇ ಅಡಗಿ ಕುಳಿತ ಕೊಲೆ ಆರೋಪಿ

06:26 PM Apr 23, 2022 | Team Udayavani |

ತಿರುವನಂತಪುರಂ: ಕೇರಳದಲ್ಲಿ ಸಿಪಿಐ(ಎಂ) ನಾಯಕ ಪುನ್ನೋಲ್‌ ಹರಿದಾಸನ್‌ ಅನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

Advertisement

ನಿಜಿಲ್‌ದಾಸ್‌(38) ಪಿಣರಾಯಿ ಅಲ್ಲಿರುವ ಸಿಎಂ ಪಿಣರಾಯಿ ವಿಜಯನ್‌ ಅವರ ನಿವಾಸದ ಬಳಿಯೇ ಇರುವ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ.

ಇದನ್ನೂ ಓದಿ:ದಿಲ್‌ಕುಶ್‌ ದ್ರಾಕ್ಷಿ ಬೆಳೆಯಿಂದ ಉತ್ತಮ ಲಾಭ; ‌ಸರ್ಕಾರದಿಂದಲೂ ಅನುದಾನ ವ್ಯವಸ್ಥೆ

ಆ ಮನೆಯ ಮಾಲೀಕ ಪ್ರಶಾಂತ್‌ ದುಬೈನಲ್ಲಿ ವಾಸವಿದ್ದು ಆತನ ಪತ್ನಿ ಇತ್ತೀಚೆಗೆ ಬೇರೊಂದು ಊರಿಗೆ ಸ್ಥಳಾಂತರಗೊಂಡಿದ್ದಳು.ಆಕೆ ನಿಜಿಲ್‌ದಾಸ್‌ಗೆ ಸ್ನೇಹಿತೆಯಾಗಿದ್ದ ಕಾರಣ, ಆತನಿಗೆ ತನ್ನ ಮನೆಯಲ್ಲಿ ಅಡಗಿಕೊಳ್ಳಲು ಸ್ಥಳ ಮಾಡಿಕೊಟ್ಟಿದ್ದಾಳೆ.

ಆರೋಪಿಗೆ ಸಹಾಯ ಮಾಡಿದ ಹಿನ್ನೆಲೆ ಆಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next