Advertisement

ಶಶಿ ತರೂರ್‌ ವಾರಂಟ್‌ ಗೊಂದಲ

10:14 AM Dec 23, 2019 | Hari Prasad |

ತಿರುವನಂತಪುರ: ಕಾಂಗ್ರೆಸ್‌ ಸಂಸದ, ಖ್ಯಾತ ಲೇಖಕ ಶಶಿ ತರೂರ್‌ ವಿರುದ್ಧ ಬಂಧನ ವಾರೆಂಟ್‌ ಜಾರಿಗೊಳಿಸಲಾಗಿದೆ ಎಂಬ ಮಾಧ್ಯಮ ವರದಿ ಗೊಂದಲ ಸೃಷ್ಟಿಸಿದೆ. ಸ್ವತಃ ಶಶಿ ತರೂರ್‌ ಈ ಬಗ್ಗೆ ಪ್ರತಿಕ್ರಿಯಿಸಿ, ನಿರ್ದಿಷ್ಟ ಸ್ಥಳೀಯ ನ್ಯಾಯಾಲಯಕ್ಕೆ ಈ ಬಗ್ಗೆ ಸ್ಪಷ್ಟನೆ ಕೇಳಲಾಗುವುದೆಂದು ತಿಳಿಸಿದ್ದಾರೆ. ತರೂರ್‌ ಬರೆದ ದಿ ಗ್ರೇಟ್‌ ಇಂಡಿಯನ್‌ ನಾವೆಲ್‌ ಕಾದಂಬರಿ 1989ರಲ್ಲಿ ಪ್ರಕಟವಾಗಿತ್ತು.

Advertisement

ಅದರಲ್ಲಿ ನಾಯರ್‌ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಕೇರಳ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಸಂಧ್ಯಾ, ಈ ವರ್ಷ ಎಪ್ರಿಲ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಡಿ.21ರೊಳಗೆ ಹಾಜರಾಗಬೇಕು ಎಂಬ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ, ಆದ್ದರಿಂದ ಬಂಧನಕ್ಕೆ ಸೂಚಿಸಲಾಗಿದೆಯೆಂದು ವರದಿಯಾಗಿದೆ. ಆದರೆ ತನಗೆ ನೀಡಿರುವ ಸಮನ್ಸ್‌ನಲ್ಲಿ ಯಾವ ದಿನಾಂಕವೆಂದು ಸೂಚಿಸಿಯೇ ಇಲ್ಲವೆಂದು ತರೂರ್‌ ತಿಳಿಸಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next