Advertisement

ಯಲ್ಲಾಪುರ: ಕಾರು ಅಡ್ಡಗಟ್ಟಿ ದರೋಡೆ; ಮೂವರು ಅಂತರಾಜ್ಯ ದರೋಡೆಕೋರರ ಬಂಧನ

07:56 PM Nov 29, 2022 | Team Udayavani |

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಇಲ್ಲಿನ  ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕಾಸರಗೋಡಿನ ಸಿರಿಯಾದ ಮಹಮ್ಮದ್ ಕಬೀರ್ ಮೈನುದ್ದೀನ್, ಕೋಜಿಕೋಡಿನ ಸುಭಾಸ ರಾಧಾಕೃಷ್ಣನ್ ಹಾಗೂ ಪಾಲಕ್ಕಾಡಿನ ನಿವೇಶ ಅಪ್ಪು ವಿಜಯಕೃಷ್ಣನ್ ಬಂಧಿತರು.

ಇವರು ಕಳೆದ ಅಕ್ಟೋಬರ್ 2 ರಂದು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕೊಲ್ಲಾಪುರದ ನೀಲೇಶ ಪಾಂಡುರಂಗ ನಾಯ್ಕ ಅವರಿಗೆ ಸೇರಿದ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಕಾರು ಹಾಗೂ ಕಾರಿನಲ್ಲಿ 2.11 ಕೋಟೊ ರೂ. ಎರಡು ಮೊಬೈಲ್ ಗಳನ್ನು  ಸಿನಿಮಿಯ ಮಾದರಿಯಲ್ಲಿ ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರಿಂದ ಮೂರು ಕಾರು, 98,000 ರೂ ನಗದು ವಶಪಡಿಸಿಕೊಂಡಿದ್ದಾರೆ.

ಕೃತ್ಯದಲ್ಲಿ 20ಕ್ಕೂ ಹೆಚ್ಚು ಅಂತರ್ ರಾಜ್ಯ ದರೋಡೆಕೋರರು ಭಾಗಿಯಾಗಿರುವುದು ತನಿಖೆ ವೇಳೆ ಹೆಸರನ್ನು ಹೇಳಿದ್ದಾರೆ. ಉಳಿದವರ ಪತ್ತೆಗಾಗಿ ಪೊಲೀಸರು ತಮ್ಮ ಜಾಲ ಬೀಸಿದ್ದಾರೆ.

ಎಸ್.ಪಿ ವಿಷ್ಣುವರ್ಧನ್, ಡಿವೈಎಸ್.ಪಿ ರವಿ ನಾಯ್ಕ ಶಿರಸಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ ಅತ್ತಾರ, ಪ್ರೊಬೇಶನರಿ ಪಿಎಸ್ಐ ಉದಯ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಡ್ಯಾನಿ ಫರ್ನಾಂಡೀಸ್, ರಾಜೇಶ ನಾಯ್ಕ, ಪರಶುರಾಮ ಕಾಳೆ, ದೀಪಕ್,ಪ್ರವೀಣ ಪೂಜಾರ, ಚೆನ್ನಕೇಶವ, ಗಿರೀಶ, ನಂದೀಶ, ಸುಕ್ರಪ್ಪ, ಶೇಷು, ವಿಜಯ, ಶೋಭಾ ನಾಯ್ಕ, ಸಿಡಿಆರ್ ಸೆಲ್ ನ ಉದಯ, ರಮೇಶ, ಯೋಗೇಶ ಕಾರ್ಯಾಚರಣೆಯಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next