Advertisement

ಐವರು ದರೋಡೆಕೋರರ ಬಂಧನ

03:28 PM Aug 03, 2022 | Team Udayavani |

ಚಿತ್ತಾಪುರ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ದರೋಡೆಕೋರರನ್ನು ತಾಲೂಕಿನ ಮಾಡಬೂಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 20 ಸಾವಿರ ರೂ. ನಗದು, ಐದು ಮೊಬೈಲ್‌ ಹಾಗೂ ಬಿಳಿ ಬಣ್ಣದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಯಡ್ರಾಮಿ ತಾಲೂಕಿನ ಮಾಸಣಗಿ ಗ್ರಾಮದ ಅರವಿಂದ ಶಾಂತಪ್ಪ ಕೂಡಿ (29), ಕಲಬುರಗಿಯ ಅಜಯ ಅಂಬಾದಾಸ ಗಾಯಕವಾಡ (27), ಚಿಂಚೋಳಿ ತಾಲೂಕಿನ ಗಡಿಕೇಶ್ವರದ ಸಂತೋಷ ಶರಣಪ್ಪ ಸಜ್ಜನ (34), ಕಲಬುರಗಿಯ ಗುಲಾಬವಾಡಿಯ ಜಗನ್ನಾಥ ಅಮೃತ ಕಟ್ಟಿಮನಿ (24), ಶಹಾಬಾದ ತಾಲೂಕಿನ ದೇವನತೆಗನೂರಿನ ರೋಶನ ಶಿವಯೋಗಿ ಗುಡೂರ (20) ಬಂಧಿತ ಆರೋಪಿಗಳು.

ಜುಲೈ 11ರಂದು ಬೆಳಗ್ಗೆ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿಯ ಗುಂಡಗುರ್ತಿ ಸಮೀಪ ಬೆಳಗ್ಗೆ ಹಾಲಿನ ವಾಹನಕ್ಕೆ ಅಡ್ಡಗಟ್ಟಿ ವಾಹನದೊಳಗೆ ಇದ್ದವರಿಗೆ ರಾಡಿನಿಂದ ಹೊಡೆದು ನಗದು ಮತ್ತು ಮೊಬೈಲ್‌ ದೋಚಿ ಪರಾರಿಯಾಗಿದ್ದರು. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆದಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next