Advertisement

Bantwal ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

12:17 AM Feb 14, 2024 | Team Udayavani |

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಫೆ. 12ರಂದು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಮಹಮ್ಮದ್‌ ಸಮೀವುಲ್ಲಾ ಹಾಗೂ ಕಂಚಿಲ ಮನೆ ನಿವಾಸಿ ಇಬ್ರಾಹಿಂ ಬಂಧಿತರು. ಗ್ರಾಮಾಂತರ ಪಿಎಸ್‌ಐ ಮೂರ್ತಿ, ಹೆಡ್‌ ಕಾನ್ಸ್‌ಟೆಬಲ್‌ ಕೃಷ್ಣ ಹಾಗೂ ಕಾನ್ಸ್‌ಟೆಬಲ್‌ಗ‌ಳಾದ ಯೋಗೇಶ್‌ ಡಿ.ಎಲ್‌., ಪುನೀತ್‌ ಅವರು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next