Advertisement

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

12:52 AM Dec 02, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮುಂಡಾಜೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.

Advertisement

ಉಳಿದಂತೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಉಡುಪಿ ಜಿಲ್ಲೆಯ ವಿವಿಧೆಡೆ ಬೆಳಗ್ಗೆ ಬಿಸಿಲಿನ ವಾತಾವರಣವಿದ್ದರೆ ಸಂಜೆ ಮೋಡ ಕವಿದಿತ್ತು.

ಕೋಟ, ಕುಂದಾಪುರ: ವಿವಿಧಡೆ ಹಾನಿ
ಕೋಟ/ಕುಂದಾಪುರ: ಮಂಗಳವಾರ ಸುರಿದ ಭಾರೀ ಮಳೆಗೆ ಕೋಟ ಹೋಬಳಿಯ ನಾಲ್ಕೂರು ಗ್ರಾಮ ಹಾಗೂ ಕುಂದಾಪುರ ಮತ್ತು ಬೈಂದೂರು ತಾಲೂಕಿನ ವಿವಿಧ ಕಡೆಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ.

ನಾಲ್ಕೂರು ನಿವಾಸಿಗಳಾದ ವಾಸು ನಾಯ್ಕ, ಪುರಷ ನಾಯ್ಕ, ಸುಧಾಕರ ಶೆಟ್ಟಿ, ಸುಬ್ಬ ಬಾಯಿ, ಕಂಚು ಶೆಟ್ಟಿ, ರವಿ ನಾಯ್ಕ, ಹಿಲಿಯಾಣ ಗ್ರಾಮದ ಕೃಷ್ಣ ನಾಯ್ಕ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಇದನ್ನೂ ಓದಿ:ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

Advertisement

ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಗಿರಿಜಾ ಅವರ ಮನೆಗೆ ಹಾನಿಯಾಗಿ, ಅಂದಾಜು 3 ಲಕ್ಷ ರೂ. ಹಾಗೂ ಕಂದಾವರ ಗ್ರಾಮದ ಸೌಮ್ಯಾ ಅವರ ಮನೆಗೆ ಹಾನಿ ಸಂಭವಿಸಿ, ಅಂದಾಜು 40 ಸಾವಿರ ರೂ. ನಷ್ಟ ಉಂಟಾಗಿದೆ.

ಬೈಂದೂರು ತಾಲೂಕಿನ ಹಡವು ಗ್ರಾಮದ ಅಕ್ಕು ಪೂಜಾರ್ತಿ, 11ನೇ ಉಳ್ಳೂರು ಗ್ರಾಮದ ಅಕ್ಕಣಿ ರಾಮ ಪೂಜಾರಿ, ಹೇರೂರು ಗ್ರಾಮದ ಪರಮೇಶ್ವರಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next