Advertisement

Manipur ಅಪಹರಣಕ್ಕೀಡಾದ ಸೇನಾಧಿಕಾರಿಯನ್ನು ರಕ್ಷಿಸಿದ ಸೇನೆ

12:59 AM Mar 09, 2024 | Team Udayavani |

ಇಂಫಾಲ: ಗಲಭೆಗ್ರಸ್ತ ಮಣಿಪುರದಲ್ಲಿ ಅಪಹಣಕ್ಕೀಡಾಗಿದ್ದ ಸೇನಾಧಿಕಾರಿಯನ್ನು ಶುಕ್ರವಾರ ಸಂಜೆ ಹೊತ್ತಿಗೆ ರಕ್ಷಿಸಲಾಗಿದೆ. 2023ರ ಮೇಯಲ್ಲಿ ಜನಾಂಗೀಯ ಗಲಭೆ ಶುರುವಾದ ಬಳಿಕ ಮಣಿಪುರದ‌ಲ್ಲಿ ಸೇನಾಧಿಕಾರಿಗಳ ಅಪಹರಣದ ನಾಲ್ಕನೇ ಘಟನೆ ಇದಾಗಿದೆ. ಜ್ಯೂನಿಯರ್‌ ಕಮಿಷನ್‌x ಅಧಿಕಾರಿ ಕೊನ್‌ಸಾಮ್‌ ಖೇಡಾ ಸಿಂಗ್‌ ವಾಸವಾಗಿದ್ದ ಮನೆಗೆ ನುಗ್ಗಿ ಈ ಕೃತ್ಯ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರ ಪೊಲೀಸರು ಮತ್ತು ಸೇನಾ ಸಿಬಂದಿ ತೀವ್ರ ಕಾರ್ಯಾಚರಣೆ ಕೈಗೊಂಡು, ಅಧಿಕಾರಿಯನ್ನು ರಕ್ಷಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 102ರಲ್ಲಿ ಸಂಚರಿಸುವ ವಾಹನಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next