Advertisement

ಕಾಶ್ಮೀರ: ಹಿಮದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

11:46 PM Jan 18, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಸೋಮವಾರ ನಾಗರಿಕರು ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತವಾಗಿದ್ದು, ಅದರಲ್ಲಿ ಸಿಲುಕಿದ್ದ ಒಂದು ಮಗುವೂ ಸೇರಿ ದಂತೆ 30 ಮಂದಿಯನ್ನು ಸೇನೆಯ ಯೋಧರು ರಕ್ಷಿಸಿದ್ದಾರೆ.

Advertisement

ತಂಗಧಾರ್‌-ಚೌಕಿಬಾಲ್‌ ಆಕ್ಸಿಸ್‌ ಬಳಿಯಲ್ಲಿ ಈ ಘಟನೆ ನಡೆದಿದೆ. ವಾಹನದ ಮೇಲೆ ಹಿಮ ಬೀಳುವಷ್ಟರಲ್ಲಿ ಅದರಲ್ಲಿದ್ದವರು ಕೆಳಕ್ಕೆ ಇಳಿದಿದ್ದಾರೆ. ಅಲ್ಲಿಯೇ ಇದ್ದ ಅವರನ್ನು ಯೋಧರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅವರ ವಾಹನವನ್ನೂ ಹಿಮದಿಂದ ಹೊರತೆಗೆಯಲಾಗಿದೆ.

ಇದನ್ನೂ ಓದಿ:ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ 16 ಜನರ ಮತ್ತೊಂದು ಗುಂಪು ಹಿಮದಲ್ಲಿ ಸಿಲುಕಿದ್ದು, ಅವರನ್ನೂ ರಕ್ಷಿಸಿರುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next